May 20, 2024

Bhavana Tv

Its Your Channel

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸಿಗರ ಪಾತ್ರ ಮಹತ್ವದ್ದು -ಮಾಜಿ ಶಾಸಕಿ ಶಾರದಾ ಶೆಟ್ಟಿ.

ಹೊನ್ನಾವರ : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸುಮಾರು ೭೫ ವರ್ಷಗಳು ಕಳೆದಿದ್ದು, ಭಾರತದ ಸ್ವಾತಂತ್ರ ಹೋರಾಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಲು ತುಂಬಾ ಹೆಮ್ಮೆಯಾಗುತ್ತಿದೆ ಎಂದು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೇಳಿದರು.

ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಡಗೇರಿಯ ಶ್ರೀ ರಾಮನಾಥ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಿದ ಕಡತೋಕಾ ಮತ್ತು ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ “ಮಹತ್ಮಾಗಾಂಧಿ ಗ್ರಾಮ ಸ್ವರಾಜ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಾತ್ಮಾಗಾಂಧಿ, ಸರದಾರ ವಲ್ಲಭಬಾಯಿ ಪಟೇಲ್, ಬಾಲಗಂಗಾಧರ ತಿಲಕ್, ಜವಾಹಾರಲಾಲ್ ನೇಹರು ಇಂತಹ ಹಲವಾರು ಸ್ವಾತಂತ್ರ ಹೋರಾಟಗಾರರ ಹೋರಾಟದ ಫಲದಿಂದ ನಾವು ಇವತ್ತು ಉತ್ತಮ ದಿನವನ್ನು ನೋಡುವಂತಾಗಿದೆ ಎಂದರು. ಸ್ವಾತಂತ್ರದ ನಂತರ ಅಧಿಕಾರಕ್ಕೆ ಬಂದAತಹ ಕಾಂಗ್ರೆಸ್ ಸರ್ಕಾರಗಳು ಜನಪರವಾಗಿದ್ದವು. ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೇಹರುರವರು ಹಸಿರು ಕ್ರಾಂತಿಯ ಮೂಲಕ ದೇಶದ ಬಡ ರೈತರನ್ನು ಸ್ವಾವಲಂಭಿಗಳಾಗುವAತೆ ಮಾಡಿದರು. ಮಾಜಿ ಪ್ರಧಾನಿ ಇಂದಿರಾಗಾAಧಿ “ಗರೀಬಿ ಹಠಾವ್” ಮತ್ತು “ಉಳುವವನೇ ಒಡೆಯ” ಎಂಬ ಮಹತ್ವದ ಕ್ರಾಂತಿಕಾರಿ ನಿರ್ಣಯದ ಮೂಲಕ ಬಡವರಿಗೆ ಆಸರೆಯಾದರು ಎಂದರು. ಆದರೆ ಇಂದಿನ ಕೇಂದ್ರದ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಬರೇ ಸುಳ್ಳು ಭರವಸೆಗಳೊಂದಿಗೆ ದೇಶವನ್ನು ಆಳುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ದೇಶದಲ್ಲಿ ಬೆಲೆ ಏರಿಕೆಯಿಂದ ಜನರ ಬಾಳು ಕಷ್ಟಕರವಾಗಿದೆ ಎಂದರು.  ಕರೋನಾದಿಂದ ದೇಶದ ಬಡ ಮಧ್ಯಮ ವರ್ಗದ ಗತಿ ಗಂಭೀರವಾಗಿದ್ದು, ಜೀವನ ನಿರ್ವಹಣೆ ತೀರಾ ದುಸ್ತರವಾಗಿದೆ ಎಂದರು.  ಕೇಂದ್ರದ ಮೋದಿ ಸರ್ಕಾರ ಕಳೆದ ಏಳು ವರ್ಷಗಳಿಂದ ಸುಳ್ಳುಗಳಿಂದಲೇ ದೇಶವನ್ನಾಳುತ್ತಿದ್ದು, ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುತ್ತೇವೆ ಎಂದು ಯುವಕರಿಗೆ ಭರವಸೆ ನೀಡಿದ ಮೋದಿ, ಈಗ ಏನನ್ನು ಮಾಡದೇ ದೇಶದಲ್ಲಿ ಈ ಹಿಂದೆ ಯುವಕರಿಗಿದ್ದ ಉದ್ಯೋಗವು ಕಳೆದುಕೊಳ್ಳುವಂತಹ ಗಂಭೀರ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದರು.  

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಪ್ರಾಸ್ತವಿಕವಾಗಿ ಮಾತನಾಡುತ್ತಾ ಎ.ಐ.ಸಿ.ಸಿ. ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ ನಿರ್ದೇಶನದಂತೆ ದೇಶಾಧ್ಯಂತ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ದೇಶದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ “ಮಹತ್ಮಾಗಾಂಧಿ ಗ್ರಾಮ ಸ್ವರಾಜ್” ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.  ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ. ಸರಕಾರಗಳು ಜನರಿಗೆ ಉತ್ತಮ ಆಡಳಿತ ನೀಡಲು ವಿಫಲವಾಗಿದ್ದು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ  ತಾರಕಕ್ಕೇರಿದೆ ಎಂದರು.  ಮೋದಿ ಸರಕಾರ ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಶಾಂತಿದೂತ ಮಹತ್ಮಾಗಾಂಧಿಯವರನ್ನು ಗುಂಡಿಟ್ಟು ಕೊಂದ ನಾಥೂರಾಮ್ 

ಗೊಡ್ಸೆ ಮತ್ತು ಅವರ ಸಹಚರರನ್ನು ವೈಭವೀಕರಿಸುತ್ತಿರುವುದು ದೇಶದ ದುರಂತ ಎಂದರು. ದೇಶದ ಇತಿಹಾಸವನ್ನು ಬಿ.ಜೆ.ಪಿ. ಸರಕಾರ ತಿರುಚಲು ಮುಂದಾಗಿದೆ ಎಂದು ಆರೋಪಿಸಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದೂಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ಮಾಜಿ ತಾಲೂಕಾ ಪಂಚಾಯತ ಸದಸ್ಯ ಶ್ರೀಮತಿ ರೂಪಾ ಗೌಡ, ನವಿಲಗೋಣ ಘಟಕದ ಅಧ್ಯಕ್ಷ ರವಿ ಪಟಗಾರ, ಮರ್ತಪ್ಪ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ನವೀಲಗೋಣ ಗ್ರಾಮಪಂಚಾಯತ ಉಪಾಧ್ಯಕ್ಷ ಎಮ್.ಡಿ. ನಾಯ್ಕ, ಬಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಕಡತೋಕಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸದಾನಂದ ನಾಯ್ಕ, ಹೇಮಾ ಗೌಡ, ಪಂಚಾಯತ ಸದಸ್ಯರಾದ ಮಾದೇವಿ ನಾಯ್ಕ, ಲಕ್ಷಿö್ಮÃ ನವಿಲಗೋಣ, ಬೇಬಿ ಮುಕ್ರಿ, ಎಲ್. ಎಮ್. ಭಟ್, ನವೀನ್ ನಾಯ್ಕ, ಕೃಷ್ಣ ಮಾರಿಮನೆ ಉಪಸ್ಥಿತರಿದ್ದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಲಂಭೋಧರ ನಾಯ್ಕ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: