May 15, 2024

Bhavana Tv

Its Your Channel

ಹಿರೇಬೈಲ್‌ನಲ್ಲಿ ಹೊಡೆದಾಟ, ದೂರು ಪ್ರತಿ ದೂರು ದಾಖಲು.

ಹೊನ್ನಾವರ ತಾಲೂಕಿನ ಹಿರೇಬೈಲ್ ಅಂದಬಳ್ಳಿಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬAಧ ಪಟ್ಟಂತೆ ಶ್ರೀಮತಿ ಭಾಗೀರಥಿ ಕೃಷ್ಣ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ತನ್ನ ಮಾವನವರ ಶ್ರಾದ್ದ ಕಾರ್ಯಕ್ರಮ ನಡೆದು ಅಂಗಳದಲ್ಲಿ ಊಟ ಮಾಡುತ್ತಿರುವ ಸಮಯದಲ್ಲಿ ಪ್ರಮೋದ ಜಯಂತ ನಾಯ್ಕ, ಪ್ರದೀಪ ಜಯಂತ ನಾಯ್ಕ, ಜಯಂತ ಹನುಮಂತ ನಾಯ್ಕ ನಮ್ಮ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದಾಗ, ಯಾಕೆ ವಿಡಿಯೋ ಮಾಡುತ್ತೀರಿ ಎಂದು ಕೇಳಿದಾಗ ಅರುಣ ಈಶ್ವರ ನಾಯ್ಕ, ಕೃಷ್ಣ ಹನುಮಂತ ನಾಯ್ಕ ಇವರಿಗೆ ಹೊಡೆದು ಹಲ್ಲೆ ಮಾಡಿರುತ್ತಾರೆ. ಸುಶೀಲಾ ಸಂತೋಷ ನಾಯ್ಕ ಇವರಿಗೆ ತಲೆಯ ಕೂದಲು ಹಿಡಿದು ಎಳೆದು ಹಲ್ಲೆ ಮಾಡಿ, ಈಗ ತಪ್ಪಿಸಿಕೊಂಡಿದ್ದೀರಿ ಮುಂದೆ ಕೊಚ್ಚಿ ಹಾಕುತ್ತೇವೆ ಎಂದು ಬೆದರಿಗೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಇದೆ ಪ್ರಕರಣಕ್ಕೆ ಸಂಬAಧ ಪಟ್ಟಂತೆ ಪ್ರಮೋದ ಜಯಂತ ನಾಯ್ಕ ರವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ನಾವು ಒಂದೇ ಕುಟುಂಬದವರಾಗಿದ್ದು, ಇಬ್ಬರ ಮನೆಯು ಹತ್ತಿರದಲ್ಲೇ ಇದೆ. ಜಮೀನಿಗೆ ಸಂಬAಧ ಪಟ್ಟ ತಕರಾರು ಇರುತ್ತದೆ.
ನಾನು ಅವರ ಅಂಗಳದ ದಾರಿಯಲ್ಲಿ ನಮ್ಮ ಮನೆಯ ತೋಟಕ್ಕೆ ನಡೆದು ಕೊಂಡು ಹೋಗುತ್ತಿದ್ದಾಗ ಕೃಷ್ಣ ಹನುಮಂತ ನಾಯ್ಕ, ಅರುಣ ಈಶ್ವರ ನಾಯ್ಕ, ಹರೀಶ ರಾಮ ನಾಯ್ಕ, ರಾಮ ಹನುಮಂತ ನಾಯ್ಕ, ಇವರು ನನ್ನನ್ನು ಅಡ್ಡ ಗಟ್ಟಿ ತಡೆದು ಹೊಡೆಯುವುದಾದರೆ ಹೊಡೆಯಿರಿ, ಎಲ್ಲಾ ಆಸ್ತಿ ನಿಮಗೆ ಬೇಕಾ ಎಂದು ಜಗಳ ಕರೆದು ತಲೆಗೆ ಹೊಡೆದು ಗಾಯ ಮಾಡಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ದೂರು ನೀಡಿದ್ದಾರೆ.

error: