April 27, 2024

Bhavana Tv

Its Your Channel

ಶ್ರೀ ಸೀತಾರಾಮಚಂದ್ರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ

ಹೊನ್ನಾವರ ತಾಲೂಕಿನ ಕೆಂಚಗಾರ್ ಸೋದೆ ವಾದಿರಾಜ ಮಠದ, ಶ್ರೀ ಸೀತಾರಾಮಚಂದ್ರ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಶೃದ್ಧಾ ಭಕ್ತಿಯಲ್ಲಿ ಸಂಭ್ರಮದಿoದ ನೆರವೇರಿತು


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಂಚಗಾರ್ ಒಕ್ಕೂಟದ ಸೇವಾಪ್ರತಿನಿಧಿಯಾಗಿರುವ, ಕೆಂಚಗಾರ್ ರಮೇಶ್ ನಾಯ್ಕರ ದೀಪೋತ್ಸವ ಸೇವೆಯ ಪ್ರಯುಕ್ತ ವಿಶೇಷವಾಗಿ ಚಂಡೆವಾದನ ಕಾರ್ಯಕ್ರಮ ನಡೆಯಿತು. ಖ್ಯಾತ ಚಂಡೆ ಗುರುಗಳಾದ ಭಟ್ಕಳದ ಗಣೇಶ್ ದೇವಾಡಿಗರ ಶಿಷ್ಯ ವೃಂದದಲ್ಲೊoದಾದ, ಶ್ರೀ ಮುಖ್ಯಪ್ರಾಣ ಚಂಡೆ ಬಳಗ ಹೊನ್ನಾವರ ಇವರಿಂದ ನಡೆದ ಕೇರಳ ಶೈಲಿಯ ಆಕರ್ಷಕ ಚಂಡೆವಾದನ ಕಾರ್ಯಕ್ರಮವು, ಭಕ್ತಾದಿಗಳನ್ನು ಹಾಗೂ ಕಲಾಭಿಮಾನಿಗಳನ್ನು ರಂಜಿಸಿತು.
ದೇವಾಲಯದ ವಸಂತ ಭಟ್ ಮಾತನಾಡಿ ರಮೇಶ್ ನಾಯ್ಕ್ ರವರು ನಮ್ಮ ಕೆಂಚಗಾರ್ ವಾದಿರಾಜ ಮಠದಲ್ಲಿ ಸೀತಾರಾಮಚಂದ್ರ ದೇವರಿಗೆ, ಪ್ರಪ್ರಥಮವಾಗಿ ಚಂಡೆವಾದನ ಸೇವೆಯನ್ನು ಮಾಡಿಸಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಶ್ರೀ ದೇವರು ಆಯುರಾರೋಗ್ಯ ಕೊಟ್ಟು ಸಮೃದ್ಧಿಯನ್ನು ಕರುಣಿಸಲೆಂದು ಹಾರೈಸಿದರು.
ರಮೇಶ್ ನಾಯ್ಕ್ ಕುಟುಂಬದವರ ಆತ್ಮೀಯ ಕರೆಗೆ, ಊರಿನವರು ಹಾಗೂ ನೆರೆಹೊರೆಯ ಊರಿನ ಭಕ್ತರು, ಬಂಧು-ಮಿತ್ರರೆಲ್ಲ ಆಗಮಿಸಿ ದೀಪೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು

error: