ಹೊನ್ನಾವರ: ಕಳೆದ ಹಲವು ದಿನಗಳಿಂದ ವಿರೋಧ ವ್ಯಕ್ತಪಡಿಸುತ್ತಿರುವ ಹೊನ್ನಾವರ ಪಟ್ಟಣದ ಉದ್ಯಮ ನಗರದ ಒಳಚರಂಡಿ ಶುದ್ದೀಕರಣ ಘಟಕದ ಪ್ರದೇಶಕ್ಕೆ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಉದ್ಯಮ ನಗರ ಹಾಗೂ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಪಕ್ಕಪಕ್ಕದಲ್ಲಿ ಮನೆಗಳು ಇವೆ. ತುಂಬಾ ಬಡವರು ಹಾಗೂ ಮೀನುಗಾರರು ವಾಸಿಸುವ ಈ ಪ್ರದೇಶದಲ್ಲಿ ಒಳ ಚರಂಡಿ ಅವಶ್ಯಕತೆ. ಅದರಲ್ಲಿಯೂ ಮುಖ್ಯವಾಗಿ ಈ ಭಾಗದಲ್ಲಿ ಒಳಚರಂಡಿ ಘಟಕದ ಶುದ್ಧಿಕರಣದ ಅವಶ್ಯಕತೆಯೇ ಇಲ್ಲಾ. ಆದ್ದರಿಂದ ಈ ಭಾಗದಲ್ಲಿ ಶುದ್ಧಿಕರಣ ಘಟಕ ಮಾಡಬಾರದೆಂದು ಶಾಸಕರಲ್ಲಿ ವಿನಂತಿಸಿಕೊAಡರು.
ಈ ವಿಷಯಕ್ಕೆ ಸಂಭAದಿಸಿದAತೆ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಮುಖಂಡರಾದ ಉಮೇಶ ಮೇಸ್ತ, ಲೋಕೇಶ ಮೇಸ್ತ, ಪಟ್ಟಣ ಪಂಚಾಯತ ಸದಸ್ಯರಾದ , ವಿನೋದ ಮೇಸ್ತ, ಮಹೇಶ ಮೇಸ್ತ , ಆರ್ ಎಸ್ ಮೇಸ್ತ ಮಂತಾದವರು ಉಪಸ್ಥಿತರಿದ್ದು ಸಮಸ್ಯೆ ಬಗ್ಗೆ ಶಾಸಕರಲ್ಲಿ ಗಮನ ಸೆಳೆದರು.
ಉದ್ಯಮನಗರದ ಮೂಲ ಗದ್ದುಗೆಯಿಂದ ಸುತ್ತುವರಿದು ಉರಿ ಬಿಸಿಲಿನಲ್ಲಿ ಕಾಲು ನಡುಗೆಯಲ್ಲಿ ನಡೆದು ಜನರ ಸಮಸ್ಯೆಯನ್ನು ಪರೀಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ಕುಮಟಾ ಶಾಸಕ ದಿನಕರ ಶೆಟ್ಟಿಯವರು ಈ ಸಮಸ್ಯೆಯನ್ನು ತಾನು ಪರೀಶಿಲಿಸಿದ್ದೇನೆ. ಈ ಬಗ್ಗೆ ತಕ್ಷಣ ಹಿರಿಯ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವದಾಗಿ ತಿಳಿಸಿದರು.
ವರದಿ: ವೆಂಕಟೇಶ ಮೆಸ್ತ ಹೊನ್ನಾವರ
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ