ಹೊನ್ನಾವರ: ರಾಜ್ಯ ಸರ್ಕಾರ ಭೂಮಿ ನೀಡಿದರೆ ಹೊನ್ನಾವರ ಪಟ್ಟಣದಲ್ಲಿ ತಕ್ಷಣ ಪ್ಲೈ ಓವರ್ ಮಂಜೂರು ಮಾಡುವುದಾಗಿ ಸಂಸದ ಅನಂತ ಕುಮಾರ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯ್ ಆರ್ ಬಿ ಅಧಿಕಾರಿಗಳ ಸಭೆಯ ನಂತರ ಮುಖಂಡರಿಗೆ ಭರವಸೆ ನೀಡಿದರು. ಹೊನ್ನಾವರದಲ್ಲಿ ಪ್ಲೈ ಓವರ್ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಗ್ರಹ ಸಚಿವರ ಉಪಸ್ಥಿತಿಯಲ್ಲಿ ಎರಡು ಸಭೆಗಳು ನಡೆದಿವೆ. ಆದರೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಇಬ್ಬರೂ ಶಾಸಕರು ಈ ಬಗ್ಗೆ ಇನ್ನೊಮ್ಮೆ ಸಭೆ ಆಯೋಜಿಸಿ ಸರ್ಕಾರದಿಂದ ಭೂಮಿ ನೀಡಿದರೆ ತಾನು ತಕ್ಷಣ ಪ್ಲೇ ಓವರ್ ಮಾಡಿಕೊಡಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಭಾವನಾ ಟಿವಿಯೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಘು ಪೈಯವರು ಹೊನ್ನಾವರದಲ್ಲಿ ಪ್ಲೈ ಓವರ ತುಂಬಾ ಅವಶ್ಯಕತೆ ಇದೆ. ಈಗಾಗಲೇ ಈ ಬಗ್ಗೆ ಹಲವು ಬಾರಿ ಸಾರ್ವಜನಿಕ ಸಭೆ, ಹೋರಾಟ ನಡೆದಿದೆ. ಅಗತ್ಯ ಬಿದ್ದರೆ ಇನ್ನೊಮ್ಮೆ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದರು ಶಾಸಕರುಗಳಾದ ದಿನಕರ ಶೆಟ್ಟಿ ಹಾಗೂ ಸುನೀಲ ನಾಯ್ಕರವರ ಬಳಿ ಚರ್ಚೆ ನಡೆಸಿದರು. ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ, ವಿಜು ಕಾಮತ, ಉಮೇಶ ನಾಯ್ಕ, ಎಂ.ಜಿ ನಾಯ್ಕ, ಸುಬ್ರಾಯ ನಾಯ್ಕ, ಸುರೇಶ ಖಾರ್ವಿ, ಸುರೇಶ ಹರಿಕಂತ್ರ, ಗಣಪತಿ ನಾಯ್ಕ ಹಳದೀಪುರ, ಎಂ ಎಸ್ ಹೆಗಡೆ ಕಣ್ಣಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ