May 4, 2024

Bhavana Tv

Its Your Channel

ಯುವಕರಿಂದಲೇ ದೇಶದ ಪ್ರಗತಿ ನಿರ್ಧಾರ – ನಿವೃತ್ತ ಶಿಕ್ಷಕ ಎಸ್. ಜೆ. ಕೈರನ್

ಹೊನ್ನಾವರ: ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದ ವೈಶಾಲ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಇಂದಿಗೂ ಯುವಜನರಿಗೆ ಯಾರು ಮಾದರಿ ಎಂದರೆ ಹೊಳೆಯುವ ಹೆಸರು ಅವರದ್ದೇ. ಅವರನ್ನು ಮಾದರಿಯಾಗಿಟ್ಟುಕೊಂಡು ಮುನ್ನುಗ್ಗುವ ಯುವಕರಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ನಿವೃತ್ತ ಶಿಕ್ಷಕರಾದ ಎಸ್. ಜೆ. ಕೈರನ್ ಹೇಳಿದರು.
ಅವರು ಭಾರತ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ, ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ ಬೆಂಗಳೂರು, ವಾರ್ತಾ ಮತ್ತು ಪ್ರಚಾರ ಸಚಿವಾಲಯ ಹಾಗೂ ಎಂ. ಪಿ. ಇ. ಸೊಸೈಟಿಯ ಎಸ್. ಡಿ. ಎಂ ಪದವಿ ಮಹಾವಿದ್ಯಾಲಯದ ವಿದ್ಯಾಥಿ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟಿçÃಯ ಯುವಜನೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಯೌವ್ವನದಲ್ಲಿ ಸವಾಲುಗಳನ್ನು ಸ್ವೀಕರಿಸಬೇಕು. ಗೆದ್ದರೆ ಮಾರ್ಗದರ್ಶಕರಾಗುತ್ತೇವೆ. ಸೋತರೆ ಅನುಭವ ಸಿಗುತ್ತದೆ. ಜ್ಞಾನಕ್ಕಾಗಿ ಯಾರನ್ನಾದರೂ ಬೇಡಬಹುದು. ಅನ್ನಕ್ಕಾಗಿ ಮಾತ್ರ ಯಾರನ್ನು ಬೇಡಬಾರದು. ಇಂದಿನ ಯುವಕರು ಆದಷ್ಟು ಹಣ, ಮೀಡಿಯಾ, ಮೊಬೈಲ್ ಮತ್ತು ಮೋಟಾರ್‌ಬೈಕ್‌ಗಳಿಂದ ದೂರವಿರುವುದನ್ನು ಕಲಿಯಬೇಕು. ವಿವಿಧ ಒತ್ತಡಗಳಿಂದ ಯುವಕರು ಆತ್ಮಹತ್ಯೆಯಂತಹ ಹೇಯಕೃತ್ಯಗಳಿಗೆ ಇಳಿಯಬಾರದು ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಉಪನ್ಯಾಸಕರಾದ ಡಾ. ಅಭಿಮಾನ್ ಶೆಟ್ಟಿ ಓಮಿಕ್ರಾನ್ ಕೋವಿಡ್ ೧೯ ಸೂಕ್ತ ನಡವಳಿಕೆಗಳು ಹಾಗೂ ಲಸಿಕಾಕರಣದ ಕುರಿತು ಅರ್ಥಪೂರ್ಣ ಉಪನ್ಯಾಸ ನೀಡಿದರು.
ಕಾರ್ಯಕ್ರವನ್ನು ಎಂ. ಪಿ. ಇ. ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್. ಎಮ್. ಭಟ್ಟ ಉದ್ಘಾಟಿಸಿದರು. ಪ್ರೊ. ಆರ್. ಕೆ. ಮೇಸ್ತ ಸ್ವಾಗತಿಸಿದರು. ಕ್ಷೇತ್ರ ಪ್ರಚಾರಾಧಿಕಾರಿಗಳಾದ ಜಿ. ತುಕಾರಾಮ ಗೌಡ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ಎಂ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಯುವ ಸಪ್ತಾಹದ ಆಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಫರ್ಧೆಗಳಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಲಕ್ಷಿಕಾಂತ ಅವರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕುಮಾರ ನಮನ್ ಹೊನ್ನಾವರ ಉಪಸ್ಥಿತರಿದ್ದರು.
ಸಭಾ ಕಾಂiÀiðಕ್ರಮದ ನಂತರದಲ್ಲಿ ‘ಶ್ರೀ ಶಂಭುಲಿoಗೇಶ್ವರ ಯಕ್ಷನಾಟ್ಯಮೇಳ ಸೊರಬ, ಶಿವಮೊಗ್ಗ’ ಇವರಿಂದ ಕೋವಿಡ್ ೧೯ ಜಾಗೃತಿ ಕುರಿತು ಸ್ವಾಸ್ತೊö್ಯÃಪಾಖ್ಯಾನ ಯಕ್ಷಗಾನ ಪ್ರಸಂಗ ನಡೆಯಿತು. ಗೋಡೆ ಪ್ರಶಾಂತ ಹೆಗಡೆಯವರ ಸಾರಥ್ಯದಲ್ಲಿ ನಡೆದ ಯಕ್ಷಗಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

error: