May 4, 2024

Bhavana Tv

Its Your Channel

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಕಛೇರಿಯಲ್ಲಿ ಇರದೇ ಸಾರ್ವಜನಿಕರಿಗೆ ಸಮಸ್ಯೆ, ಬೇರೆಯವರ ನಿಯೋಜನೆಗೆ ಕರುನಾಡ ವಿಜಯಸೇನೆಯಿಂದ ಆಗ್ರಹ

ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯವರು ಅನಾರೋಗ್ಯದಿಂದ ಕರ್ತವ್ಯ ಹಾಜರಾಗದೇ ನಾಗರೀಕರಿಗೆ ತುಂಬಾ ಅನಾನೂಕೂಲತೆ ಉಂಟಾಗುತ್ತಿದ್ದು ತಕ್ಷಣ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿಬೇಕೇಂದು ಕರುನಾಡ ವಿಜಯ ಸೇನೆಯ ಪಧಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕರುನಾಡ ವಿಜಯ ಅಧ್ಯಕ್ಷ ವಿನಾಯಕ ಆಚಾರಿಯವರು ಹೊನ್ನಾವರದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಗೈರು ಹಾಜರಾತಿಯಿಂದ ನಾಗರೀಕರಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಕರುನಾಡ ವಿಜಯ ಸೇನೆಯ ವಕ್ತಾರರಾದ ಶ್ರೀರಾಮರವರು ಮಾತನಾಡಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಗೈರು ಹಾಜರಿ ಇರುವುದರಿಂದ ನಾಗರೀಕರಿಗೆ ತೊಂದರೆಯಾಗಿದೆ. ಪಟ್ಟಣ ಪಂಚಾಯತ ಸದಸ್ಯರು ಹಾಗೂ ಸಂಭAದ ಪಟ್ಟ ಅದಿಕಾರಿಗಳು ಮುತುವರ್ಜಿ ವಹಿಸಬೆಕೆಂದರು.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಈ ಸಮಸ್ಯೆಯ ಕುರಿತು ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತರವರು ಮಾತನಾಡಿ ಮುಖ್ಯಾಧಿಕಾರಿಗಳ ಅನಾರೋಗ್ಯ ಸಮಸ್ಯೆಯಿಂದ ಸ್ವಲ್ಪ ತೊಂದರೆಯಾಗಿದೆ. ಸಿಬ್ಬಂದಿಗಳ ಕೊರತೆಯಿಂದ ಕೂಡ ಸಮಸ್ಯೆಯಾಗಿದೆ. ಆದರು ಇದ್ದ ಸಿಬ್ಬಂದಿ ವರ್ಗದವರು ಎಲ್ಲಾ ಕರ್ತವ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಶಾಸಕ ದಿನಕರ ಶೆಟ್ಟಿಯವರು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಸ್ಪಂದಿಸಬೆಕಾಗಿದೆ.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: