May 2, 2024

Bhavana Tv

Its Your Channel

ಪಂಚರಾಜ್ಯಗಳ ಚುನಾವಣಾ ಫಲಿತಾಂಶ; ಹೊನ್ನಾವರದಲ್ಲಿ ಬಿಜೆಪಿ ಮಂಡಳದಿOದ ವಿಜಯೋತ್ಸವ.

ಹೊನ್ನಾವರ: ದೇಶದ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಪ್ರಚಂಡ ಬಹುಮತವನ್ನು ಸಾಧಿಸಿದ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಳದಿAದ ಸಿಹಿ ಹಂಚಿ ಪಟಾಕಿ ಸುಡುವುದರೊಂದಿಗೆ ವಿಜಯೋತ್ಸವ ಪಟ್ಟಣದ ಶರಾವತಿ ಸರ್ಕಲ ಬಳಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕರವರು ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರವರ ಸರ್ಕಾರ ಅತ್ಯಂತ ಪ್ರಚಂಡ ಬಹುಮತ ಸಾಧಿಸಿದೆ. ನಲವತ್ತು ವರ್ಷಗಳ ನಂತರ ಬಿಜೆಪಿ ಅಧಿಕಾರ ಪಡೆದಿದ್ದರು ಐದು ವರ್ಷಗಳಲ್ಲಿ ಉತ್ತಮ ಸರ್ಕಾರ ನೀಡಿ ಮತ್ತೆ ಜನಮನ್ನಣೆ ಪಡೆದಿದೆ ಎಂದರು. ಅದರಂತೆ ಉತ್ತರಖಾಂಡ, ಜಾರ್ಖಂಡ, ಗೋವಾ ಹಾಗೂ ಮಣಿಪುರದಲ್ಲಿಯೂ ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ರಾಜು ಭಂಡಾರಿ, ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಕಾಮತ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಸುರೇಶ ಹರಿಕಾಂತ, ಎ.ಪಿ.ಎಮ್ ಸಿ ಉಪಾಧ್ಯಕ್ಷ ಪರಮೇಶ್ವರ ನಾಯ್ಕ, ಪಟ್ಟಣ ಪಂಚಾಯತ ಸದಸ್ಯರಾದ ಮಹೇಶ ಮೇಸ್ತ, ಶಿ ಶ್ರೀಕಲಾ ಶಾಸ್ತಿç, ಶ್ರೀಮತಿ ಶಾರದಾ ನಾಯ್ಕ,ಸುಬ್ರಹ್ಮಣ್ಯ ಶಾಸ್ತಿç, ಎಂ ಎಸ್ ಹೆಗಡೆ ಕಣ್ಣಿ, ನಾಗರಾಜ ಹೆಗಡೆ, ಉಮೇಶ ನಾಯ್ಕ, ನಾಗರಾಜ ಹೆಗಡೆ ,ಲೋಕೇಶ ಮೇಸ್ತ ಸುರೇಶ ಹೊನ್ನಾವರ, ಸುಭಾಷ ಹರಿಜನ,ಉದಯ ಪ್ರಭು, ದತ್ತತ್ರೇಯ ಮೇಸ್ತ, ವಿನೋದ ನಾಯ್ಕ ರಾಯಲಕೇರಿ ಮುಂತಾದದವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ: ವೆಂಕಟೇಶ ಮೇಸ್ತ

error: