May 2, 2024

Bhavana Tv

Its Your Channel

ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕಡತೋಕಾದ ಲಕ್ಷ್ಮೀನಾರಾಯಣ ಶಂಭು ಭಾಗವತರಿಗೆ ಇಂದು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸಮರ್ಪಣೆ

ಹೊನ್ನಾವರ: ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕಡತೋಕಾದ ಲಕ್ಷ್ಮೀನಾರಾಯಣ ಶಂಭು ಭಾಗವತ ಅವರಿಗೆ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ “ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದಡಿ ಗೌರವ ಸಮರ್ಪಣೆ ಮಾ. 14 ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ಪರಿಷತ್ತಿನ ಪರವಾಗಿ ಗೌರವಿಸಲಿದ್ದಾರೆ. ಮಾಜಿ ಜಿ.ಪಂ.ಸದಸ್ಯ ಶಿವಾನಂದ ಹೆಗಡೆ, ರಂಗಕರ್ಮಿ ಜಿ.ಡಿ.ಭಟ್ಟ ಕೆಕ್ಕಾರ, ಯಕ್ಷಲೋಕದ ಡಾ. ಶ್ರೀಪಾದ ಹೆಗಡೆ, ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಮಂಜುನಾಥ ಭಟ್, ಕಡತೋಕಾದ ಗೋಪಾಲಕೃಷ್ಣ ಭಾಗವತ ಹಾಗೂ ತಾಲೂಕಿನ ವಿವಿಧ ಸಂಘಟನೆಯ ಪಾಲ್ಗೊಳ್ಳಲಿದ್ದಾರೆ ಕಸಾಪ ಪ್ರಕಟಣೆ ತಿಳಿಸಿದೆ.

error: