May 15, 2024

Bhavana Tv

Its Your Channel

ಹೊನ್ನಾವರ ಸರ್ಕಾರಿ ನೌಕರರಿಗೆ ಬೀಳ್ಕೊಡುಗೆ ಸಮಾರಂಭ

ಹೊನ್ನಾವರ ತಾಲೂಕಾ ಪಂಚಾಯತ ಸಭಾಭವನದಲ್ಲಿ ಮೇ 31 ರಂದು ನಿವೃತ್ತ ಹೊಂದಿದ ಸಕಾ9ರಿ ನೌಕರರನ್ನು ಸನ್ಮಾನಿಸಿ ಬಿಳ್ಕೋಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕರವರು, ಹೊನ್ನಾವರದಲ್ಲಿ ಸರ್ಕಾರಿ ನೌಕರರು ಸದಾ ಉತ್ತಮವಾಗಿ ಪ್ರಾಮಾಣಿಕವಾದ ಸೇವೆ ಸಲ್ಲಿಸುತ್ತಾರೆ. ಇಂದು ನಿವೃತ್ತಿ ಹೊಂದಲಿರುವ ಜಿಲ್ಲಾ ಪಂಚಾಯತ ಸಹಾಯಕ ಅಭಿಯಂತರರಾದ ಸುರೇಶ ನಾಯ್ಕ ಹಾಗೂ ತಾಲೂಕಾ ಪಂಚಾಯತ ಪ್ರಥಮ ದರ್ಜೆ ಸಹಾಯಕಿ ಉಷಾ ಟಿ. ರವರು ತಮ್ಮ ಸೇವಾ ಅವಧಿಯಲ್ಲಿ ದಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಶಿರಸಿ ಮೂಲದವರಾದ ಉಷಾ ಟಿ.ಯವರು 1879ರಲ್ಲಿ ಸೇವೆ ಆರಂಬಿಸಿದ್ದರು. ನಂತರ ಹೊನ್ನಾವರ ಜಿಲ್ಲಾ ಪಂಚಾಯತ ಇಂಜಿನಿಯರ್ ಉಪ-ವಿಭಾಗದಲ್ಲಿ 22 ವಷ9, ತಾಲೂಕಾ ಪಂಚಾಯತ ಹೊನ್ನಾವರದಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಂತರ ಪ್ರಥಮ ದರ್ಜೆಯ ಗುಮಾಸ್ತರಾಗಿ ಬಡ್ತಿ ಹೊಂದಿ ನಿವೃತ್ತರಾಗಿದ್ದಾರೆ. ಅವರು ನಗರ ಬಸ್ತಿಕೇರಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಎನ್. ಎನ್. ನಾಯ್ಕರವರ ಪತ್ನಿ.

ಸುರೇಶ ಲಕ್ಷ್ಮಣ ನಾಯ್ಕರವರು ಮೂಲತಃ ಕುಮಟಾ ಕತಗಾಲದವರಾಗಿದ್ದು, 1983ರಲ್ಲಿ ಜೋಯಿಡಾದಲ್ಲಿ ಸೇವೆ ಆರಂಭಿಸಿದ್ದರು. ವಿವಿಧ ತಾಲೂಕುಗಳಲ್ಲಿ ಸೇವೆ ಸಲ್ಲಿಸಿ ಹೊನ್ನಾವರ ಜಿಲ್ಲಾ ಪಂಚಾಯತ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿ ನಿವೃತ್ತಿ ಹೊಂದಿದ್ದಾರೆ.

ಉಷಾ ಟಿ.ಯವರು ಮಾತನಾಡಿ ಹೊನ್ನಾವರ ತಾಲೂಕಾ ಪಂಚಾಯತದಲ್ಲಿ ಕಳೆದ ಎಂಟು ವಷ9ಗಳಿಂದ ಸೇವೆ ಸಲ್ಲಿಸಿದ್ದೇನೆ. ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಕೂಡ ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಜಿಲ್ಲಾ ಪಂಚಾಯತ ಸಹಾಯಕ ಅಭಿಯಂತರರಾದ ಸುರೇಶ ನಾಯ್ಕರವರು ಮಾತನಾಡಿ, ತಮ್ಮ ಸೇವಾ ದಿನಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ
ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ….

error: