ಹೊನ್ನಾವರ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನಿರ್ಮಾಣವಾದ ನಂದಿನಿ ಪಾರ್ಲರ್ ಶಾಖೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿ ರಾಜ್ಯದಲ್ಲಿ ಬಹಳಷ್ಟು ಯಶಸ್ಸು ಕೆ.ಎಂ.ಪ್ ಸಾಧಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡಿ ಹಲವು ಸೌಲಭ್ಯ ನೀಡುತ್ತಿದೆ. ರೈತರು ಕೃಷಿ ಉತ್ಪನ್ನದ ಜೊತೆಗೆ ಹಾಲಿನ ಉತ್ಪನ್ನವನ್ನು ಮಾರಾಟ ಮಾಡುವ ಮೂಲಕ ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಸಿಹಿ, ಖಾರ, ತಂಪುಪಾನೀಯ ವ್ಯವಸ್ಥೆ ಹೊಂದಿರುವ ಇಲ್ಲಿಯ ಪಾರ್ಲರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಕೆ.ಎಂ.ಎಫ್ ನಿರ್ದೇಶಕರಾದ ಪಿ. ವಿ. ನಾಯ್ಕ ಮಾತನಾಡಿ ಸಾವಿರಾರು ರೈತರ ಶ್ರಮದ ಮೂಲಕ ರೈತರಿಂದ ರೈತರಿಗಾಗಿಯೇ ಕೆ.ಎಂ.ಎಫ್ ವಿಸ್ತಾರವಾಗಿದೆ. ಯಾವುದೇ ಕಲಬೆರೆಕೆ ಹೊಂದಿರದೇ ನಂದಿನಿ ಹಾಲು ಸೇರಿದಂತೆ 50 ಕ್ಕೂ ಹೆಚ್ಚಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಭಾಗದ 32ಕ್ಕೂ ಅಧಿಕ ಸಂಘಗಳಿದ್ದು, 15ಕ್ಕೂ ಹೆಚ್ಚ ಪಾರ್ಲರ್ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ, ಪ.ಪಂ.ಸದಸ್ಯ ದತ್ತಾತ್ರೇಯ ಮೆಸ್ತ ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ, ಬಿಜೆಪಿ ಮುಖಂಡರಾದ ಎಂ.ಎಸ್.ಹೆಗಡೆ, ಯೋಗೀಶ ಮೇಸ್ತ, ಪ್ರದೀಪ ಮೇಸ್ತ ಮಾರುತಿ ಸಂಕೊಳ್ಳಿ, ಅಂಗಡಿ ಮಾಲಕರಾದ ಶ್ರೀಧರ ಶೆಟ್ಟಿ ಮತ್ತು ಯಶೋಧರ ನಾಯ್ಕ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,