April 27, 2024

Bhavana Tv

Its Your Channel

ಎಂ.ಪಿ.ಇ. ಸೊಸೈಟಿ ಸೆಂಟ್ರಲ್ ಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ‍್ಯೋತ್ಸವ ದಿನಾಚರಣೆ

ಹೊನ್ನಾವರ: ಭಾರತೀಯರಾದ ನಾವು ನಮ್ಮಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಈ ಹಿಂದೆಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ್ದ ಮಹನೀಯರತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುತ್ತಾ ,ಸ್ವಾತಂತ್ರö್ಯ ಭಾರತದ 75ನೇ ವರ್ಷದಆಚರಣೆಎಂ.ಪಿ.ಇ. ಸೊಸೈಟಿ ಸೆಂಟ್ರಲ್‌ಶಾಲೆಯ ವಿದ್ಯಾರ್ಥಿಗಳಿಗೆ ಶುಭಾಷಯವನ್ನು ಪ್ರಾಶುಂಪಾಲೆ ಕಾಂತಿ ಭಟ್ ಹಾರೈಸಿದರು.


ಎಂ.ಪಿ.ಇ. ಸೊಸೈಟಿ ಸೆಂಟ್ರಲ್‌ಶಾಲೆಯಲ್ಲಿನಡೆದ 75ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಎಂ.ಪಿ.ಇ.ಸೊಸೈಟಿಅಧ್ಯಕ್ಷ ಶ್ರೀ.ಕೃಷ್ಣಮೂರ್ತಿ ಭಟ್ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದ್ದರು.ಈ ವೇಳೆ ಮಾತನಾಡಿದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ವಿದ್ಯಾರ್ಥಿಗಳಿಗೆ ಸ್ವಾತಂತ್ರö್ಯ ಮಹೋತ್ಸವದ ಶುಭವನ್ನುಕೋರಿದರು.
75ನೇ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಹಾಗೂ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಛದ್ಮವೇಷ, ದೇಶಭಕ್ತಿಗೀತೆ, ಭಕ್ತಿಗೀತೆ, ರಸ ಪ್ರಶ್ನೆ, ನೃತ್ಯ, ಮುಂತಾದ ಸ್ಪರ್ಧೆಗಳು, ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಾಲೆಯ ಪ್ರಾಂಶುಪಾಲರು, ಎಲ್ಲ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಹಲವಾರು ಪಾಲಕರು, ಶಿಕ್ಷಕೇತರ ಸಿಬ್ಬಂದಿಗಳುಧ್ವಜಾರೋಹಣಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕಿಯರಾದ ಶಾರದಾ ಭಟ್ಟ, ರಾಜೇಶ್ವರಿ ಕೆ, ಮಾತನಾಡಿದರು. ಶಿಕ್ಷಕರಾದ ವಿಷ್ಣು ತಾಂಡೇಲ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

error: