ಹೊನ್ನಾವರ ತಾಲೂಕಿನ ಹಿರೇಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರತಿಭಾನ್ವಿತ ಸಾಥಿ ವಾದಕರ ಜೊತೆಗೂಡಿ ಮಕ್ಕಳಿಗೆ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶಾರದಾ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾರದಾ ಪೂಜೆಯ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳೆಲ್ಲ ಆಸಕ್ತಿಯಿಂದ ಭಜನೆಯಲ್ಲಿ ಭಾಗಿಯಾಗಿ ಶಾರದಾಂಬೆಗೆ ಗಾನಸೇವೆಗೈದರು. ಹಳೆಯ ವಿದ್ಯಾರ್ಥಿನಿ ಬಿಂದು ನಾಯ್ಕ್, ಪ್ರತಿಭಾ ವಾದ್ಯವೃಂದದ ಮಾರುತಿ ನಾಯ್ಕ್ ಸೊಗಸಾಗಿ ಹಾಡಿ ಕಿರಿಯರನ್ನು ಪ್ರೋತ್ಸಾಹಿಸಿದರು.
ಇವರಿಗೆಲ್ಲ ಪೂರಕವಾಗಿ ಜನಪ್ರಿಯ ಯಕ್ಷಗಾನ ಕಲಾವಿದ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಜನಾರ್ಧನ್ ನಾಯ್ಕ್ ಹಾರ್ಮೋನಿಯಂ ಸಾಥ್ ನೀಡಿದರು.
ಪ್ರತಿಭಾನ್ವಿತ ತಬಲಾ ವಾದಕ ಪ್ರದೀಪ್ ಭಂಡಾರಿ ತಬಲಾ ಸಾಥ್ ನೀಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.
ಭಜನಾ ಕಾರ್ಯಕ್ರಮದ ಬಳಿಕ, ಶಾಲೆಯಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ಜ್ಞಾನದ ಸುಧೆಯನ್ನು ಬೆಳಗಿಸುವ ತಾಯಿ ಶಾರದಾಂಬೆಯನ್ನು ಭಕ್ತಿಯಿಂದ ಪೂಜಿಸಿ ಪ್ರಸಾದ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳು, ಮುಖ್ಯಧ್ಯಾಪಕ ಶ್ರೀಪತಿ ಭಟ್ ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಮತ್ತು ಪಾಲಕರು, ಊರಿನವರೆಲ್ಲ ಶಾರದಾ ಪೂಜೆಯಲ್ಲಿ ಭಾಗಿಯಾಗಿ
ತಾಯಿ ಸರಸ್ವತಿ ದೇವಿಯ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರನ್ನು ಸಹ ಶಿಕ್ಷಕ ಶ್ರೀನಿವಾಸ್ ನಾಯ್ಕ್ ವಂದಿಸಿದರು.
ವರದಿ:ನರಸಿಂಹ ನಾಯ್ಕ್ ಹರಡಸೆ
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು