May 14, 2024

Bhavana Tv

Its Your Channel

ಕುಮಟಾ ಹೊನ್ನಾವರ ಕ್ಷೇತ್ರದ ಹೊಸ ಕಲ್ಪನೆಯೊಂದಿಗೆ ಸೂರಜ ನಾಯ್ಕ ಸೋನಿ ಅವರ ನೇತ್ರತ್ವದಲ್ಲಿ ಜನಪರ ಯಾತ್ರೆ

ಹೊನ್ನಾವರ :– ಕುಮಟಾ ಹೊನ್ನಾವರ ಕ್ಷೇತ್ರದ ಹೊಸ ಕಲ್ಪನೆಯೊಂದಿಗೆ ಸೂರಜ ನಾಯ್ಕ ಸೋನಿ ಅವರ ನೇತ್ರತ್ವದಲ್ಲಿ ಜನಪರ ಯಾತ್ರೆ ರವಿವಾರ ಬೆಳಿಗ್ಗೆ ಹೊನ್ನಾವರ ಶರಾವತಿ ಸರ್ಕಲ್ ಬಳಿ ಚಾಲನೆ ಗೊಂಡಿತು.

ಸೂರಜ ನಾಯ್ಕ ಸೋನಿ ಗೆಳೆಯರ ಬಳಗ ಇವರ ಸಹಕಾರದೊಂದಿಗೆ ಸೂರಜ್ ನಾಯ್ಕ ಸೋನಿ ಅವರ ನೇತ್ರತ್ವದಲ್ಲಿ ಜನಪರ ಯಾತ್ರೆಯನ್ನು ಜೆಡಿಎಸ್ ಪ್ರಯುಖರಾದ ಗಣಪಯ್ಯ ಗೌಡ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು.

ಸೂರಜ ನಾಯ್ಕ ಸೋನಿಯವರು ತಮ್ಮ ಜನಪರ ಯಾತ್ರೆಯ ಬಗ್ಗೆ ಪ್ರಾಸ್ಥಾವಿಕವಾಗಿ ಮಾತನಾಡಿ ತಮ್ಮ ಉದ್ದೇಶದ ವಿವರ ತಿಳಿಸಿದರು.ವೇದಿಕೆಯಲ್ಲಿ ಉಪಸ್ಥಿತರಿಂದ ಹಿರಿಯ ಸಾಹಿತಿ ಎನ್ ನಾಯಕ, ಸುಮುಖಾನಂದ ಜಲವಳ್ಳಿ, ರವೀಂದ್ರ ನಾಯ್ಕ ಸಿರ್ಸಿ ಮುಂತಾದವರು ಮಾತನಾಡಿದರು
ಈ ಸಂದರ್ಭದಲ್ಲಿ ಸೂರಜ ನಾಯ್ಕ ಸೋನಿ ಅಭಿಮಾನಿಗಳು ಮತ್ತು ಹಿತೈಸಿಗಳು ಹೂಹಾರ ಹಾಕಿ ಗೌರವಿಸಿ ಶುಭ ಕೊರಿದರು.
ನಂತರ ಜನಪರ ಯಾತ್ರೆ ಹೊನ್ನಾವರದಿಂದ ದಂಡಿನ ದುರ್ಗಾ ದೇವಸ್ಥಾನದ ಮಾರ್ಗವಾಗಿ ಕುಮಟಾಕ್ಕೆ ತೆರಳಿತು, 1000ಕ್ಕೂ ಹೆಚ್ಚು ಸೂರಜ ಅಭಿಮಾನಿಗಳು ಹಾಗೂ ಹಿತೈಷಿಗಳು ಪಾತ್ರ ಯಾತ್ರೆ ಯಲ್ಲಿ ಪಾಲ್ಗೋಂಡಿದ್ದರು.
ಈ ಸಂದರ್ಭದಲ್ಲಿ ಚಿಕ್ಕನಕೊಡ್ ಗ್ರಾ.ಪಂ ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ಮಾಜಿ ಜಿ,ಪಂ ಸದಸ್ಯೆ ವೀಣಾ ಸೂರಜ್ ಸೋನಿ,ಅಯ್ಯಪ್ಪ ನಾಯ್ಕ,ಪೀಟರ್ ಮೆಂಡಿಸ್,ರಾಜು ಮಾಸ್ತಿಹಳ್ಳ,ಮಹಮದ್ ಅಲಿ,ಇಲಿಯಾಸ್ ಶೇಖ್,ಸಚೀನ್ ನಾಯ್ಕ,ಮಂಜುನಾಥ ಗೌಡ ನಾಜಗಾರ,ರಾಘು ನಾಯ್ಕ,ಗಜು ನಾಯ್ಕ,ದತ್ತ ಪಟಗಾರ,ಲಕ್ಷ್ಮೀ ಪಟಗಾರ,ದೀಪಾ ಹರಿಕಂತ್ರ,ಸುರೇಶ್ ಮೇಸ್ತ ಮತ್ತಿತರಿದ್ದರು

ಕುಮಟಾ ಹೊನ್ನಾವರ ಪೋಲಿಸ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದೊಬಸ್ತ ಕಾರ್ಯ ನಿರ್ವಹಿಸಿದರು.

error: