May 1, 2024

Bhavana Tv

Its Your Channel

ಖ್ಯಾತ ತಬಲಾ ವಾದಕ ದಿ. ಪಂಡಿತ್.ಎನ್.ಎಸ್.ಹೆಗಡೆ ಯವರಿಗೆ ನಾಳೆ ಶಿಷ್ಯ ವೃಂದ ಹಾಗೂ ಅಭಿಮಾನಿಗಳಿಂದ ನುಡಿ-ನಾದ-ಗಾನ ನಮನ.

ಹೊನ್ನಾವರ: ಶ್ರೀ ಎನ್.ಎಸ್ ಹೆಗಡೆಯವರು ಸಂಗೀತ ವಿಸ್ತರಣೆಯ ಅಪಾರ ಒಲವಿನಿಂದ ತನ್ನದೇ ಆದ ಇಂಚರ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಸಾಕಷ್ಟು ಕಲಾವಿದರನ್ನು ರೂಪಿಸಿದ್ದಲ್ಲದೇ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಒಟ್ಟಿನಲ್ಲಿ ತನ್ನ ಜೀವನವನ್ನು ತಬಲಾ ಕಲಿಸುವಿಕೆ ಮತ್ತು ನಿರಂತರತೆಗಾಗಿ ಮೀಸಲಿಟ್ಟು ಶ್ರೀಗಂಧದAತೆ ತೇದುಕೊಂಡಿದ್ದಾರೆ. ಆ ಮೂಲಕ ಅಪಾರ ಶಿಷ್ಯ ವರ್ಗವನ್ನು ರೂಪಿಸುತ್ತಲೇ ಸಾಗಿದ್ದರು ಆದ್ದರಿಂದಲೇ ಇವರು ಒಬ್ಬ ತಬಲಾ ಸೂರ್ಯ ಎಂದು ಕರೆಸಿಕೊಂಡಿದ್ದಷ್ಟೇ ಅಲ್ಲ ಅದಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ದಿನಾಂಕ ೧೩/೧೧/೨೨ ರವಿವಾರದಂದು ಹೊನ್ನಾವರದ ಹೊಸಾಕುಳಿಯ ಶ್ರೀ ಲಕ್ಷಿö್ಮÃನಾರಾಯಣ ಸಭಾಭವನದಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೮.೦೦ ರ ತನಕ ಅವರ ಶಿಷ್ಯ ವೃಂದ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿದ್ದು ಶ್ರೀಯುತರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ

error: