ಹೊನ್ನಾವರ ತಾಲೂಕಿನ ಆರೊಳ್ಳಿಯಲ್ಲಿ ಶ್ರೀ ಮಹಾಗಣಪತಿ ಹಿಂದು ಮುಕ್ರಿ ಗೆಳೆಯರ ಬಳಗ ಮುಗ್ವಾ ಇವರು ಆಯೋಜಿಸಿದ ಮುಕ್ರಿ ಸಮಾಜದ ಪ್ರಥಮ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಜಿಲ್ಲಾ ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಚಾಲನೆ ನೀಡಿದರು.
ನಂತರ ಮಾತನಾಡಿ ಸಮಾಜದ ಸಂಘಟನೆ ಆದಾಗ ಮಾತ್ರ ಸಮಾಜದ ಕುಂದುಕೊರತೆ ಬಗೆಹರಿಸಬಹುದು. ಪ್ರತಿಯೊರ್ವರನ್ನು ಮುಖ್ಯವಾಹಿನಿಗೆ ತರಲು ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮ ನಡೆಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಮುಗ್ವಾದ ಮುಕ್ರಿ ಸಮಾಜ ಊರಿನವರೆಲ್ಲರನ್ನು ಒಗ್ಗೂಡಿಸಿ ಯಶ್ವಸಿ ಕಾರ್ಯಕ್ರಮ ನಡೆಸುವ ಮೂಲಕ ಮಾದರಿಯಾಗಿದ್ದಾರೆ. ಈ ಸಂಘಟನೆಯು ಎಲ್ಲಾ ಸಮಾಜದವರನ್ನು ಒಗ್ಗೂಡಿಸಿ ಭಾವೈಕ್ಯತೆ ಸಾರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರೋಪಿ ಅನಾವರಣಗೊಳಿಸಿದ ಗ್ರಾ.ಪಂ. ಮಾಜಿ ಸದಸ್ಯ ಕೃಷ್ಣ ಗೌಡ ಹಳಗೇರಿ ಮಾತನಾಡಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಸಮಾಜದವರೆಲ್ಲರೂ ಒಂದಡೆ ಸೇರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೀರಿ. ವೈಯಕ್ತಿಕವಾಗಿ ಗ್ರಾ.ಪಂ.ಸದಸ್ಯನಾಗಿ ಆಯ್ಕೆಮಾಡಲು ಸಹಕರಿಸಿದಕ್ಕೆ ಅಭಿನಂದಿಸಿದರು.
ಕ್ರೀಡಾಂಗಣ ಉದ್ಘಾಟಿಸಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕವಾಗಿ ಸಮಾಜದ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಕಾರ್ಯ ಬಹುಮುಖ್ಯವಾಗಿದೆ. ಸಮಾಜದ ಏಳ್ಗೆಗಾಗಿ ನಾವೆಲ್ಲರೂ ಪ್ರಯತ್ನಿಸೋಣ, ಉದ್ಯೋಗ, ಶಿಕ್ಷಣ, ಆರೊಗ್ಯ ಕ್ಷೇತ್ರ ಬಲವರ್ಧನೆಗೆ ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಗಣಪಿ ಮುಕ್ರಿ, ಉಮೇಶ ಗೌಡ, ಗೊವಿಂದ ಭಟ್, ಐ.ವಿ.ನಾಯ್ಕ, ಉಮೇಶ ಗೌಡ, ಜಗ್ಗು ತಾಂಡೇಲ್, ಮುಖಂಡರಾದ ನಾರಾಯಣ ಹೆಗಡೆ, ನಾಗೇಶ ನಾಯ್ಕ, ಪೊಲೀಸ್ ಸಿಬ್ಬಂದಿ ರಮೇಶ, ಶಿಕ್ಷಕರಾದ ಚಂದ್ರಶೇಖರ ಮಡಿವಾಳ,ಗಜಾನನ ಮುಕ್ರಿ, ರವಿ ಮುಕ್ರಿ, ಸುಬ್ರಹ್ಮಣ್ಯ ಮುಕ್ರಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕಬಡ್ಡಿ ಪಂದ್ಯಾವಳಿ ಜರುಗಿತು.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು