ಹೊನ್ನಾವರ : ಲಿವಿಂಗ್ ಅರ್ಥ್ ಫೌಂಡೇಶನ್ ಆಶ್ರಯದಲ್ಲಿ ಹೊನ್ನಾವರ ಮೀನುಗಾರರ ಸಂಘಟನೆಗಳ ಪದಾಧಿಕಾರಿಗಳಿಗೆ ಮತ್ತು ಮೀನುಗಾರರಿಗಾಗಿ ಕಾಸರಕೋಡ ಟೊಂಕದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಒಂದು ದಿನದ ಕರಾವಳಿ ಸಬಲೀಕರಣ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ನಡೆಯಿತು. ದೇಶದ ಬಿಹಾರ ಮತ್ತು ಕರ್ನಾಟಕದಲ್ಲಿ ಸ್ಥಳೀಯ ಸಾರ್ವಜನಿಕರ ಅಹವಾಲುಗಳನ್ನು ಆಲಿಸದೇ ಕೇಂದ್ರ ಸರ್ಕಾರವು ಇತ್ತೀಚೆಗೆ ಏಕಪಕ್ಷೀಯವಾಗಿ ಸಿಆರ್ ಝೆಡ್ ನಿಯಮಗಳನ್ನು ಮತ್ತು ಸಮುದ್ರದ ಭರತರೇಖೆಯಿಂದ 50 ಮೀಟರ್ ಭೂಪ್ರದೇಶವನ್ನು ಪೋರ್ಟ ವ್ಯಾಪ್ತಿಗೆ ಒಳಪಡಿಸಿ ಮೂಲ ನಕ್ಷೆಗಳನ್ನು ತಿದ್ದುಪಡಿ ಮಾಡಲಾಗಿದೆ. ಹೀಗೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವದು ಮತ್ತು ಪರಂಪರಾಗತ ಮೀನುಗಾರರ ಹಿತರಕ್ಷಣೆಗೆ ಅಗತ್ಯ ಕ್ರಮ ವಹಿಸದೇ ಇರುವುದು ಕಂಡು ಬಂದಿದೆ. ಪರಿಸರ, ಜೀವವೈವಿಧ್ಯತೆಗಳ ರಕ್ಷಣೆ ಮತ್ತು ಮೀನುಗಾರರ ಜೀವನೋಪಾಯವೂ ಸೇರಿದಂತೆ ಕರಾವಳಿಯ ಸಬಲೀಕರಣದ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಂತಹ ಪರಿಸರ ಮತ್ತು ಜನವಿರೋಧಿ ನಡೆಯನ್ನು ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸುವ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯವಾದಿ ಕುಮಾರಿ,ಶ್ರೀಝಾ ಚಕ್ರವರ್ತಿ ಯವರು ಪ್ರತಿಪಾದಿಸಿದ್ದಾರೆ.ಅವರು ಇಲ್ಲಿನ ಮೀನುಗಾರರ ಸಂಘಟನೆಗಳ ಪದಾಧಿಕಾರಿಗಳಿಗೆ ಮತ್ತು ಮೀನುಗಾರರಿಗೆ ಕರಾವಳಿ ಸಬಲೀಕರಣದ ಕುರಿತು ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಕಾರ್ಯಾಗಾರವನ್ನು ಉದ್ದೇಶಿಸಿ, ಕಡಲ ವಿಜ್ನಾನಿ ಡಾ.ಪ್ರಕಾಶ ಮೇಸ್ತ ಮಾತನಾಡಿ ಇತ್ತೀಚಿನ ಸಿಆರ್ಝೆಡ್ ನಿಯಮಗಳ ತಿದ್ದುಪಡಿಯಿಂದ ಸ್ಥಳೀಯ ಮೀನುಗಾರರಿಗೆ ಆಗಬಹುದಾದ ಅನಾನುಕೂಲತೆಗಳ ಬಗ್ಗೆ ಮತ್ತು ಜೀವ ವೈವಿಧ್ಯತೆಗಳ ರಕ್ಷಣೆಯ ವಿಚಾರದಲ್ಲಿ ಎದರಾರಾಗಬಹುದಾದ ಸಮಸ್ಯೆಗಳ ಬಗ್ಗೆ ವಿವರಿಸಿದರು.ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾAತ ಕೊಚರೇಕರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕರಾವಳಿ ಮೀನುಗಾರರ ಸಂಘದ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು. ಮೀನುಗಾರರ ಪ್ರಮುಖ ಗಣಪತಿ ತಾಂಡೇಲ ಮತ್ತು ರೇಖಾ ತಾಂಡೇಲ್, ರೇಣುಕಾ ಜಿ. ತಾಂಡೇಲ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.ಲೀವಿಂಗ್ ಆರ್ಥ್ ಫೌಂಡೇಶನ್ನಿನ ಪ್ರತಿನಿಧಿ ವಕೀಲೆ. ಸರಿತಾ ಫರ್ನಾಂಡಿಸ್ ಸಿಆರ್ಝೆಡ್ ನಿಯಮಗಳ ಇತ್ತೀಚಿನ ತಿದ್ದುಪಡಿ ಮತ್ತು ಸಿಆರ್ಝೆಡ್ ನಕ್ಷೆಯ ಬದಲಾವಣೆಯ ಕಾನೂನಾತ್ಮಕ ಸಾಧಕ ಬಾಧಕಗಳ ಬಗ್ಗೆ ವಿವರಿಸಿಸಿದರು. ಸಂದೀಪ ಹೆಗಡೆ. ಸಾವಿತ್ರಿ ತಾಂಡೇಲ್, ಪುಷ್ಪಾ ತಾಂಡೇಲ್, ನಾಗವೇಣೀ ತಾಂಡೇಲ, ಸುನಿತಾ ತಾಂಡೇಲ್, ರಮೇಶ್ ತಾಂಡೇಲ್, ಹರೀಷ ತಾಂಡೇಲ್, ಚಿದಂಬರ ತಾಂಡೇಲ್, ವಿನಯ ಟಿ. ಶ್ರೀಧರ ತಾಂಡೇಲ್, ರಾಜುತಾಂಡೇಲ ಇನ್ನು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್