May 13, 2024

Bhavana Tv

Its Your Channel

ಅವ್ಯವಸ್ಥೆಯ ಬಸ್ ನಿಲ್ದಾಣ ಸ್ವಚ್ಚಗೊಳಿಸಿದ ಪೌರಕಾರ್ಮಿಕರು

ಹೊನ್ನಾವರ: ಪಟ್ಟಣದ ಪ್ರಭಾತನಗರದ ಬಸ್ ನಿಲ್ದಾಣದಲ್ಲಿ ಅಸ್ವಚ್ಚತೆಗೆ ಕಡೆಗೂ ಮುಕ್ತಿ ದೊರೆತಿದೆ. ಕಳೆದ ನಾಲ್ಕು ತಿಂಗಳಿನಿ0ದ ಮಾನಸಿಕ ಅಸ್ವಸ್ಥನೊರ್ವರು ವಾಸವಾಗಿ ಬಸ್ ನಿಲ್ದಾಣದ ಸುತ್ತ ಯಾರೊಬ್ಬರು ನಿಲ್ಲುವ ಸ್ಥಿತಿ ಇರಲಿಲ್ಲ. ಎಸ್.ಡಿ.ಎಂ.ಕಾಲೇಜಿನ ಮುಂಭಾಗದಲ್ಲಿರುವ ಎರಡು ಬಸ್ ನಿಲ್ದಾಣ ಸುತ್ತಮುತ್ತ ಕಳೆದ ಮೂರು ತಿಂಗಳಿನಿAದ ಈ ಸಮಸ್ಯೆ ಕಾಡುತ್ತಿತ್ತು. ಇದೀಗ ಪೌರ ಕಾರ್ಮಿಕರು ಆ ವ್ಯಕ್ತಿಯನ್ನು ಸ್ಥಳದಿಂದ ಕಳುಹಿಸಿರುದಲ್ಲದೇ ಎರಡು ಬಸ್ ನಿಲ್ದಾಣ ಸ್ವಚ್ಚಗೊಳಿಸುವ ಮೂಲಕ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಪೌರಕಾರ್ಮಿಕರ ಈ ಕಾರ್ಯದಿಂದ ದಿನನಿತ್ಯ ಬಸ್ ಕಾಯುವಾಗ ಅನುಭವಿಸುವ ಸಮಸ್ಯೆ ಬಗೆಹರಿದಿದ್ದು, ವಿದ್ಯಾರ್ಥಿಗಳು ಹಾಗೂ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಯವರು ಪೌರಕಾರ್ಮಿಕರ ಕಾರ್ಯ ಶ್ಲಾಘಿಸಿದ್ದಾರೆ. ಪ.ಪಂ.ಅಧಿಕಾರಿಗಳು, ಹಾಗೂ ವಾರ್ಡ ಸದಸ್ಯರಾದ ಶಿವರಾಜ ಮೇಸ್ತ ಮಾತನಾಡಿ ನಮ್ಮ ಪೌರಕಾರ್ಮಿಕರ ಕಾರ್ಯಕ್ಕೆ ಹೆಮ್ಮೆಯೆನಿಸುತ್ತಿದೆ. ಮಳೆಗಾಲದ ಗಟಾರ ಸಮಸ್ಯೆ ಇರಲಿ ಅಥವಾ ಇನ್ನಿತರ ಕಾರ್ಯಕ್ಕೆ ಶಿಘ್ರವಾಗಿ ಸ್ಪಂದಿಸುತ್ತಾರೆ. ಸಂತೆ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರದ ವಾರದ ಸಂತೆಯ ಕಸವನ್ನು ತಮ್ಮ ದೈನಂದಿನ ಕೆಲಸದ ಜೊತೆ ಎರಡು ದಿನ ತೆಗೆಯುವಷ್ಟು ಕಸ ಸಂಗ್ರಹವಾಗುತ್ತಿದ್ದು, ಸಾರ್ವಜನಿಕರು ಹಾಗೂ ಅಂಗಡಿಕಾರರು ಹಸಿ ಕಸ ಮತ್ತು ಒಣ ಕಸ ಬೆರ್ಪಡಿಸಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದರು.
…………………

error: