ಹೊನ್ನಾವರ: ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 2022 ನೆಯ ಸಾಲಿನ ಪ್ರಶಸ್ತಿಗಳಿಗೆ ತಾಲ್ಲೂಕಿನ ಮೂವರು ಲೇಖಕಿಯರು ಭಾಜನರಾಗಿದ್ದಾರೆ.
ಶಿಕ್ಷಕಿ-ಲೇಖಕಿ ವಿಭಾಗದ ಕೆ.ಟಿ.ಬನಶಂಕರಮ್ಮ ಪ್ರಶಸ್ತಿಯು ತಾಲ್ಲೂಕಿನ ಕೆರೆಕೋಣದ ಕವಯಿತ್ರಿ ,ಕಥೆಗಾರ್ತಿ ಮಾಧವಿ ಭಂಡಾರಿಯವರಿಗೆ ಲಭಿಸಿದೆ. ಪ್ರಕಾಶಕಿ-ಲೇಖಕಿ ವಿಭಾಗದ ಪ್ರೇಮಾ ಭಟ್ ಮತ್ತು ಎ.ಎಸ್. ಭಟ್ ಪ್ರಶಸ್ತಿಗೆ ಕವಲಕ್ಕಿಯ ವೈದ್ಯೆ ಡಾ.ಎಚ್.ಎಸ್.ಅನುಪಮಾ ಆಯ್ಕೆಯಾಗಿದ್ದಾರೆ.
ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಕಥೆಗೆ ನೀಡುವ ನಿರುಪಮಾ ಪ್ರಶಸ್ತಿಗೆ ಹೊನ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕಾವ್ಯ ಎನ್ ಮನಮನೆ ಅವರ “ಆನುದೇವಾ ಹೊರಗಣವಳು” ಕಥೆ ಆಯ್ಕೆಯಾಗಿದ್ದು, ಪ್ರಶಸ್ತಿ ಪಡೆಯಲಿದ್ದಾರೆ.
44ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂಘವು ಕಳೆದ ಮೂರು ವರ್ಷಗಳ ಪ್ರಶಸ್ತಿಗಳನ್ನು ಪ್ರಕಟಗೊಳಿಸಿದ್ದು, ರಾಜ್ಯದ ವಿವಿಧ ಭಾಗದ ಹಲವು ಲೇಖಕಿಯರು ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಜುಲೈ 23ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ