May 13, 2024

Bhavana Tv

Its Your Channel

ಮಾಧವಿ ಭಂಡಾರಿ, ಪ್ರೇಮಾ ಭಟ್ ಮತ್ತು ಡಾ.ಎಚ್.ಎಸ್.ಅನುಪಮಾರರಿಗೆ ಪ್ರಶಸ್ತಿ

ಹೊನ್ನಾವರ: ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 2022 ನೆಯ ಸಾಲಿನ ಪ್ರಶಸ್ತಿಗಳಿಗೆ ತಾಲ್ಲೂಕಿನ ಮೂವರು ಲೇಖಕಿಯರು ಭಾಜನರಾಗಿದ್ದಾರೆ.
ಶಿಕ್ಷಕಿ-ಲೇಖಕಿ ವಿಭಾಗದ ಕೆ.ಟಿ.ಬನಶಂಕರಮ್ಮ ಪ್ರಶಸ್ತಿಯು ತಾಲ್ಲೂಕಿನ ಕೆರೆಕೋಣದ ಕವಯಿತ್ರಿ ,ಕಥೆಗಾರ್ತಿ ಮಾಧವಿ ಭಂಡಾರಿಯವರಿಗೆ ಲಭಿಸಿದೆ. ಪ್ರಕಾಶಕಿ-ಲೇಖಕಿ ವಿಭಾಗದ ಪ್ರೇಮಾ ಭಟ್ ಮತ್ತು ಎ.ಎಸ್. ಭಟ್ ಪ್ರಶಸ್ತಿಗೆ ಕವಲಕ್ಕಿಯ ವೈದ್ಯೆ ಡಾ.ಎಚ್.ಎಸ್.ಅನುಪಮಾ ಆಯ್ಕೆಯಾಗಿದ್ದಾರೆ.
ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಕಥೆಗೆ ನೀಡುವ ನಿರುಪಮಾ ಪ್ರಶಸ್ತಿಗೆ ಹೊನ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕಾವ್ಯ ಎನ್ ಮನಮನೆ ಅವರ “ಆನುದೇವಾ ಹೊರಗಣವಳು” ಕಥೆ ಆಯ್ಕೆಯಾಗಿದ್ದು, ಪ್ರಶಸ್ತಿ ಪಡೆಯಲಿದ್ದಾರೆ.
44ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂಘವು ಕಳೆದ ಮೂರು ವರ್ಷಗಳ ಪ್ರಶಸ್ತಿಗಳನ್ನು ಪ್ರಕಟಗೊಳಿಸಿದ್ದು, ರಾಜ್ಯದ ವಿವಿಧ ಭಾಗದ ಹಲವು ಲೇಖಕಿಯರು ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಜುಲೈ 23ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.

error: