May 14, 2024

Bhavana Tv

Its Your Channel

`ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಪುಸ್ತಕ ಬಿಡುಗಡೆ

ಹೊನ್ನಾವರ ; ಏಕರೂಪ ನಾಗರಿಕ ಸಂಹಿತೆ ಎಂದರೆ ದೇಶದ ಎಲ್ಲಾ ನಾಗರಿಕರು ಒಂದೇ ರೀತಿಯಲ್ಲಿ ಬದುಕುವುದಕ್ಕೆ ಅವಕಾಶ ಕಲ್ಪಿಸುವುದಾಗಿದೆ ಎಂದು ಲೇಖಕ ರೋಹಿತ್ ಚಕ್ರತೀರ್ಥ ಹೇಳಿದರು. ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಆಯೊಜಿಸಿದಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಪುಸ್ತಕ ಬಿಡುಗಡೆ ಹಾಗೂ ಏಕರೂಪ ನಾಗರಿಕ ಸಂಹಿತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಒಂದೊ0ದು ಧರ್ಮಕ್ಕೆ ಒಂದೊAದು ಕಾನೂನು ಇದೆ. ಮದುವೆ ಮುಂತಾದ ವೈಯಕ್ತಿಕ ಜೀವನಕ್ಕೆ ಸಂಬ0ಧಿಸಿ ಹಿಂದೂ, ಜೈನ, ಬೌದ್ದ ಧರ್ಮಗಳಿಗೆ ಒಂದು ಕಾನೂನಾಗಿದ್ದರೆ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಯಹೂದಿಗಳನ್ನು ಬೇರೆ ರೀತಿಯ ಕಾನೂನುಗಳಿವೆ. ಇದರಿಂದ ವಿಭಿನ್ನವಾದ ಸೌಲಭ್ಯಗಳು ಮತ್ತು ಅಸ್ವಾಭಾವಿಕ ಜೀವನ ಶೈಲಿಗಳು ನೆಲೆಯೂರಲು ಕಾರಣವಾಗಿದೆ. ಏಕರೂಪ ನಾಗರಿಕ ಸಂಹಿತೆಯಿ0ದ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಾಗುವುದು. ಇದಕ್ಕೆ ಎರಡೂ ಸರ್ಕಾರ ಸಮ್ಮತಿ ಸೂಚಿಸಬೇಕಾಗಿದೆ ಎಂದರು.
ಪ್ರಾ0ಶುಪಾಲ ಡಾ. ಜಿ.ಎಸ್.ಹೆಗಡೆ ಮಾತನಾಡಿ, ಲೇಖಕರಾದ ತಿಮ್ಮಣ್ಣ ಭಟ್ ಅವರು ಬರೆದ ಜಗನ್ನಾಥ ರಾವ್ ಜೋಶಿ ಅವರ ಜೀವನ ಕುರಿತ ಪುಸ್ತಕವನ್ನು ಅಯೋಧ್ಯ ಪ್ರಕಾಶನವು ಪ್ರಕಟಿಸಿದ್ದು, ಎಲ್ಲರೂ ಜಗನ್ನಾಥ ರಾವ್ ಅವರ ಆದರ್ಶಪ್ರಾಯವಾದ ಜೀವನ ಶೈಲಿಯನ್ನು ಅರಿಯಲು ಅವಕಾಶ ದೊರೆತಿದೆ ಎಂದರು. ಶಾಸಕ ದಿನಕರ ಶೆಟ್ಟಿ `ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಅವರ ಪುಸ್ತಕ ಬಿಡುಗಡೆಗೊಳಿಸಿದರು. ಶರಾವತಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಜಿ.ವಿ.ಭಟ್, ಸರ್ವೋತ್ತಮ ನಾಯ್ಕ ಉಪಸ್ಥಿತರಿದ್ದರು.

error: