May 2, 2024

Bhavana Tv

Its Your Channel

ರಾಡ್ ನಿಂದ ಹೊಡೆದು ಹಲ್ಲೆ ಮಾಡಿರುವ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹೊನ್ನಾವರ ; ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಲಿನ ಇಡಗುಂಜಿ ಕುಳಿಮನೆ ಕ್ರಾಸ್ ಎದುರು ಇರುವ ಗಜಾನನ ನಾಯ್ಕ ಅಂಗಡಿ ಹತ್ತಿರ ಈ ಹಿಂದೆ ನಡೆದ ಘಟನೆಯ ವಿಚಾರವಾಗಿ ವ್ಯಕ್ತಿ ಒಬ್ಬರಿಗೆ ರಾಡ್ ನಿಂದ ಹೊಡೆದು ಹಲ್ಲೆ ಮಾಡಿರುವ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣಕ್ಕೆ ಸಂಬAಧ ಪಟ್ಟಂತೆ ಬಳಕೂರು ಕೆಳಗಿನ ಕೇರಿಯ ವಿನಾಯಕ ನಾಯ್ಕ ದೂರು ನೀಡಿದ್ದು, ತನ್ನ ಗೆಳೆಯ ಹಾಮಕ್ಕಿ ಅಂಬಿಗರ ಕೇರಿಯ ಗಣೇಶ ಕಮಲಾಕರ ಅಂಬಿಗನ ಜೊತೆ ಮಾತನಾಡುತ್ತಾ ನಿಂತಿದ್ದಾಗ, ಇಡಗುಂಜಿ ಬೈಲಾರ ಕೇರಿಯ ರಾಜೇಶ ಧರ್ಮ ನಾಯ್ಕ ಇತ ನನ್ನನ್ನು ಗಟ್ಟಿಯಾಗಿ ಅಪ್ಪಿ ಹಿಡಿದುಕೊಂಡು ಗಣೇಶ ಅಂಬಿಗನನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈಯ್ಯತ್ತಿರುವಾಗ ಆತನ ಅಣ್ಣ ಉದಯ ಧರ್ಮ ನಾಯ್ಕ ಬೈಕ್ ನಲ್ಲಿ ಬಂದು ಅವಾಚ್ಯವಾಗಿ ಬೈದು ರಾಡ್ ನಿಂದ ಹಲ್ಲೆ ಮಾಡಿರುತ್ತಾನೆ. ಇತ ಮಾಡಿರುವ ಹಲ್ಲೆಯಿಂದ ಗಣೇಶ ಅಂಬಿಗನಿಗೆ ಪೆಟ್ಟಾಗಿದ್ದು, ರಕ್ತಸ್ರಾವ ಉಂಟಾಗಿದೆ ಎಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: