ವರದಿ: ನಟರಾಜ ಗದ್ದೆಮನೆ ಕುಮಟಾ
ಕುಮಟಾ: ಪಟ್ಟಣದ ಪುರಭವನದಲ್ಲಿ ಆಶ್ರಯ ಫೌಂಡೇಶನ್ ಮುಖ್ಯಸ್ಥ ರಾಜೀವ ಗಾಂವ್ಕರ ಸತತ ಪರಿಶ್ರಮದಿಂದ ಡೆಲ್ ಟೆಕ್ನೋಲಿಜಿಸ್ ವತಿಯಿಂದ ೧ ಸಾವಿರ ಉಚಿತ ಕೊವಿಡ್ ೧೯ ಲಸಿಕಾ ಅಭಿಯಾನಕ್ಕೆ ಶಾಸಕ ದಿನಕರ ಶೆಟ್ಟಿ ಶನಿವಾರ ಚಾಲನೆ ನೀಡಿದರು.
ನಂತರ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ನೀಡುವುದು ನನ್ನ ಮೂಲ ಉದ್ದೇಶವಾಗಿದ್ದು, ಈಗಾಗಲೇ ೧.೨೦ ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ೮೦ ಸಾವಿರ ಜನರಿಗೆ ಮೊದಲ ಡೋಸ್ ಮತ್ತು ೪೦ ಸಾವಿರ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಮ್ಮ ಫೌಂಡೇಶನ್ ವತಿಯಿಂದ ೧ ಸಾವಿರ ಲಸಿಕೆ ನೀಡಿದ್ದರು. ಅದನ್ನು ಗೋಕರ್ಣ ಭಾಗದಲ್ಲಿ ನೀಡಲಾಗಿದೆ. ಆಶ್ರಯ ಫೌಂಡೇಶ್ನಿoದ ೧ ಸಾವಿರ ಲಸಿಕೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆಶ್ರಯ ಫೌಂಡೇಶನ್ ಮುಖ್ಯಸ್ಥ ರಾಜೀವ ಗಾಂವ್ಕರ, ಡೆಲ್ ಟೆಕ್ನೋಲಿಜಿಸ್ ಮುಖ್ಯಸ್ಥೆ ಅರ್ಚನಾ ಎಸ್.ಆರ್, ಹೋಪ್ ಫೌಂಡೇಶನ್ ಮುಖ್ಯಸ್ಥ ಜೊಸೇಫ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಇದ್ದರೂ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ