ಕುಮಟಾ :-ಶಿರಾಲಿಯ ಮಾರುತಿ ಸಹಕಾರಿ ಪತ್ತಿನ ಸಂಘದ ಕುಮಟಾ ಶಾಖೆಯಲ್ಲಿ ನಡೆದ ಗ್ರಾಹಕ ಸಭೆಯನ್ನು ಸಂಘದ ಅಧ್ಯಕ್ಷ ಅಶೋಕ ಪೈ ಗ್ರಾಹಕರೋಡಗೂಡಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕುಮಟಾ ಶಾಖೆಯು ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನು
ಸಾಧಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ೪೨ ಲಕ್ಷ ಲಾಭಗಳಿಸಿದೆ. ಈ ಯಶಸ್ಸಿಗೆ ಉತ್ತಮ ಗ್ರಾಹಕರ ಸಹಕಾರ ಹಾಗೂ ಸಿಬ್ಬಂದಿಗಳ ಪರಿಶ್ರಮ ಕಾರಣವಾಗಿದೆ ಎಂದರು. ಕುಮಟಾ ಶಾಖೆಯ ಸ್ವಂತ ಕಟ್ಟಡದ ನಿರ್ಮಾಣದಲ್ಲಿ ಹಾಗೂ ಸತತ ೭ ವರ್ಷ ಶೇ.೧೦೦ ರಷ್ಟು ಸಾಲ ವಸೂಲಾತಿ ಮಾಡುವಲ್ಲಿ ಶಾಖಾ ವ್ಯವಸ್ಥಾಪಕ ಪ್ರಸನ್ನ ಪ್ರಭು ಶ್ರಮಿಸಿದ್ದಾರೆ ಎಂದೂ ಹೇಳಿದರು.
ಸಂಘದ ಗ್ರಾಹಕರಾದ ರಾಮನಾಥ ಶಾನಭಾಗ, ಮುಕುಂದ ಶಾನಭಾಗ, ಅರುಣ ನಾಯಕ ಮುಂತಾದವರು ಪ್ರಸನ್ನ ಪ್ರಭುರವರು ನೀಡಿದ ಉತ್ತಮ ಸೇವೆಯನ್ನು ಸ್ಮರಿಸಿ ಶ್ಲಾಘಿಸುತ್ತಾ ವರ್ಗಾವಣೆಗೊಂದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಗ್ರಾಹಕರಾದ ಶ್ರೀಕಾಂತ ಭಟ್ಟ ಮಾತನಾಡುತ್ತ ಪ್ರಾರಂಭಿಕ ಹಂತದಲ್ಲಿ ೨ ಕೋಟಿ ಠೇವಣಿಯಿಂದ ಪ್ರಾರಂಭಗೊAಡು ಈಗ ೧೦ ಕೋಟಿಗೂ ಮಿಕ್ಕಿರುವುದು ಹಾಗೂ ೫ ಕೋಟಿ ರೂಪಾಯಿ ಸಾಲದಿಂದ ಸುಮಾರು ೧೭ ಕೋಟಿ ರೂಪಾಯಿಗೆ ತುಲುಪಿರುವುದು ಮಾರುತಿ ಸಂಘದ ಮೇಲೆ ಗ್ರಾಹಕರಿಗಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ ಎಂದರು.
ಶಾಖಾ ವ್ಯವಸ್ಥಾಪಕ ಪ್ರಸನ್ನ ಪ್ರಭು ಸಹಕಾರ ಮಹಾಮಂಡಳ ಬೆಂಗಳೂರು ಇವರಿಂದ ಕುಮಟಾ ಶಾಖೆಗೆ ಉತ್ತಮ ಶಾಖಾ ಪ್ರಶಸ್ತಿ ದೊರಕಿಸಿ ಕೊಡಲು ಸಿಗಲು ಹಾಗೂ ಶಾಖೆಯ ಉತ್ತಮ ಪ್ರಗತಿ ಹೊಂದಲು ಕಾರಣೀಕರ್ತರಾದ ಸಿಬ್ಬಂದಿಗಳ ಹಾಗೂ ಗ್ರಾಹಕ ಬಾಂಧವರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಹಕರಾದ ಚಂದ್ರ ಕುಬಾಲ ಮಾತನಾಡಿ ೧೬ ಕೋಟಿಗೂ ಮಿಕ್ಕಿ ಸಾಲ ನೀಡುವದು ಹಾಗೂ ಸತತ ೭ ವರ್ಷಗಳಿಂದ ಶೇ.೧೦೦ ಸಾಲ ವಸೂಲಾತಿ ಮಾಡುವುದು ಬಹಳ ಕಷ್ಟದ ಕೆಲಸ ಈ ಸಾಧನೆ ಮೆಚ್ಚುವಂತದ್ದು ಎಂದರು. ಭಟ್ಕಳ ಶಾಖೆಗೆ ವರ್ಗಾವನೆಗೊಂಡಿದ್ದ ವ್ಯವಸ್ಥಾಪಕ ಪ್ರಸನ್ನ ಪ್ರಭು ಅವರನ್ನು ಸಂಘದ ಪರವಾಗಿ ಹಾಗೂ ಗ್ರಾಹಕರ ಪರವಾಗಿ ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಡಲಾಯಿತು.
ನಿರ್ದೇಶಕರಾದ ಉಮೇಶ ಕಾಮತ, ವಾಮನ ಕಾಮತ, ರವೀಂದ್ರ ಪ್ರಭು, ಸುರೇಶ ಭೋವಿ ಹಾಗೂ ಗ್ರಾಹಕರ ಪರವಾಗಿ ಮಾಬ್ಲೇಶ್ವರ ಶೇಟ್, ಬಾಬುರಾಯ ಕುಬಾಲ, ಅರುಣ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಶಾಖಾ ವ್ಯವಸ್ಥಾಪಕ ಮಂಜುನಾಥ ಶಾನಭಾಗ ವಂದನಾರ್ಪಣೆಗೈದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ