ಕುಮಟಾ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೌತಿಕವಾಗಿ ೬ ಮತ್ತು ೭ನೇ ತರಗತಿಯ ಪ್ರಾರಂಭೊತ್ಸವದAದು ವಿದ್ಯಾರ್ಥಿಗಳನ್ನು ಶಿಕ್ಷಕರು ಆರತಿ ಎತ್ತಿ ಮಕ್ಕಳನ್ನು ಸಂಭ್ರಮದಿAದ ಸ್ವಾಗತಿಸಲಾಯಿತು.
ಕೊರೊನಾ ಕಾರಣದಿಂದಾಗಿ ಚಟುವಟಿಕೆ ನಿಲ್ಲಿಸಿದ್ದ ಶಾಲೆಗಳು ಇಂದು ಪುನಃ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಶಾಲೆಯನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು.ಈ ಸಂದರ್ಭದಲ್ಲಿ ಮಕ್ಕಳಿಗೆ ಆರತಿ ಎತ್ತಿ ಸ್ವಾಗತ ಮಾಡಿಕೊಂಡರು ಇನ್ನು ಶಾಲೆ ಪ್ರಾರಂಭಕ್ಕೆ ಆಗಮಿಸಿದ ಆಡಳಿತಧಿಕಾರಿ ಈಶ್ವರ್ ನಾಯ್ಕ್ ಮಾತನಾಡಿ ಸರಕಾರದ ಆದೇಶ ಮೇರೆಗೆ ಇಂದು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಹಸಿರು ತೋರಣಗಳಿಂದ ಸಿಂಗರಿಸಿ, ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಬಟ್ಟೆಗಳನ್ನು ಕೊಡುವ ಮೂಲಕ ಸ್ವಾಗತ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇನ್ನೂ ಕ್ಷೇತ್ರ ಶಿಕ್ಷಣಧಿಕಾರಿ ರಾಜೇಂದ್ರ ಭಟ್ ಮಾತನಾಡಿ, ಶಾಲೆ ಪ್ರಾರಂಭಗೊAಡಿದ್ದು, ಪೋಷಕರು ಮಕ್ಕಳನ್ನು ತಪ್ಪಿಸದೇ ಶಾಲೆಗೆ ಕಳುಹಿಸಬೇಕು. ಸರಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಅವುಗಳ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಿ.ಎಂ ಮುಕ್ರಿ, ದತ್ತಾತ್ರೇಯ ಭಟ್, ಮಂಜುನಾಥ್ ರೈಕರ, ಮಂಜುನಾಥ ನಾಯ್ಕ ಇದ್ದರೂ
ಭಾವನಾ ಟಿವಿಗಾಗಿ ನಟರಾಜ ಗದ್ದೆಮನೆ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ