ವರದಿ: ನಟರಾಜ ಗದ್ದೆಮನೆ ಕುಮಟಾ
ಕುಮಟಾ : ತಾಲೂಕಿನ ಸಂತೆಗುಳಿ ಕಲ್ವೇಯ ಸುಮಾರು ೩೧ ವರ್ಷದ ಶ್ರೀಕಾಂತ ರಾಮಚಂದ್ರ ಗೌಡಾ ಪ್ರತಿ ದಿನವು ಸಂಜೆಯ ಹೊತ್ತಿಗೆ ಕುಡಿದು ಬಂದು ಸಣ್ಣ ಸಣ್ಣ ವಿಷಯದಲ್ಲಿ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ ಘಟನೆ ನಡೆದ ದಿನ ಸಂಜೆ ಸುಮಾರು ೭.೩೫ ರ ಹೊತ್ತಿಗೆ ಮಗ ಶ್ರೀಕಾಂತ ರಾಮಚಂದ್ರ ಗೌಡ ಕುಡಿದ ಅಮಲಿನಲ್ಲೇ ಮನೆಗೆ ಬಂದಿದ್ದು ಮೆನ್ ಗೇಟನ್ ಸರಗೋಲನ್ನ ಯಾಕೆ ಹಾಕಿದ್ದೀರಿ ಎಂದು ತರಾಟೆ ತೆಗೆದಿದ್ದಾನೆ ಅಪ್ಪ ಮಗನ ಮಧ್ಯೆ ಜಗಳ ಆರಂಭವಾಗಿ ನೀನು ದಿನಾಲೂ ಹಿಗೇ ಕುಡಿದು ಬಂದು ಜಗಳ ಮಾಡಿದರೆ ನಿನ್ನನ್ನ ಸಾಯಿಸಿ ಬಿಡುತ್ತೆನೆ ಎಂದು ೫೫ ವರ್ಷದ ರಾಮಚಂದ್ರ ಕುಪ್ಪು ಗೌಡ ಹೇಳಿದ್ದಕ್ಕೆ ಸಿಟ್ಟಿಗೆದ್ದ ಮಗ ಅಲ್ಲೆ ವರಾಂಡಾದಲ್ಲಿದ್ದ ಕತ್ತಿಯಿಂದ ಹಲ್ಲೆ ಮಾಡಿದ್ದು , ತಂದೆ ರಕ್ಕದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದಾನೆ
ತಾಯಿ ಸುಮಿತ್ರಾ ರಾಮಚಂದ್ರ ಗೌಡಾ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ ಆನಂದ ಮೂರ್ತಿ. ರವಿ.ಗುಡ್ಡೆ. ಎ.ಎಸ್ ಐ. ನಾಗಾರಜಾಪ್ಪ ಆರೋಪಿಯನ್ನ ಬಂಧಿಸಿದ್ದಾರೆ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ