May 19, 2024

Bhavana Tv

Its Your Channel

ಯಾಣದ ಶ್ರೀ ಭೈರವೇಶ್ವರನಿಗೆ ವಿಶೇಷ ಪೂಜೆ

ಕುಮಟಾ: ಯಾಣದ ಶ್ರೀ ಭೈರವೇಶ್ವರನಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹಾ ಶಿವರಾತ್ರಿಯನ್ನು ಭಕ್ತಿಪೂರ್ಣವಾಗಿ ಆಚರಿಸಿದರು.

ಮೋಹಿನಿ ಮತ್ತು ಭೈರವೇಶ್ವರ ಶಿಖರದಲ್ಲಿ ಆತ್ಮಲಿಂಗದ ರೂಪದಲ್ಲಿ ನೆಲೆಸಿರುವ ಭೈರವೇಶ್ವರ ದೇವನಿಗೆ ಭಕ್ತರು ಅಭಿಷೇಕ ಗೈದು ಬಿಲ್ವಪತ್ರೆ ಅರ್ಪಿಸಿದರು. ಭೈರವೇಶ್ವರನ ದರ್ಶನ ಪಡೆದ ಭಕ್ತರು ಶಿಖರಗಳ ತಪ್ಪಲಿನಲ್ಲಿ ವಿಶ್ರಾಂತಿ ಪಡೆದು ಪ್ರಸಾದ ಸ್ವೀಕರಿಸಿದರು. ಶಿವರಾತ್ರಿ ನಿಮಿತ್ತ ಉಪವಾಸ ಕೈಗೊಂಡ ಬಹುತೇಕ ಭಕ್ತರು ಪ್ರಕೃತಿ ಮಡಿಲಿನಲ್ಲಿ ಕೆಲ ಗಂಟೆಗಳ ಕಾಲ ಕಳೆದು ಖುಷಿ ಪಡುವ ಜೊತೆಗೆ ಶಿವ ಧ್ಯಾನ ಮಾಡುತ್ತಿರುವುದು ಕಂಡುಬAತು.

ಪಟ್ಟಣದ ಶ್ರೀ ಕುಂಭೇಶ್ವರ ದೇವಸ್ಥಾನದಲ್ಲೂ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ, ಭಕ್ತಿಯಿಂದ ಸೇವೆ ಗೈದರು. ಸಹಸ್ರ ಕುಂಬಾಭಿಷೇಕವನ್ನು ಶಿವನಿಗೆ ಮಾಡಲಾಯಿತು. ಭಕ್ತರು ಬಿಲ್ವ, ಪತ್ರೆ ಅರ್ಪಿಸಿ, ವಿಶೇಷ ಪೂಜೆ ಗೈಯ್ಯುವ ಜೊತೆಗೆ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

error: