May 4, 2024

Bhavana Tv

Its Your Channel

ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿಯವರಿಂದ ಚಾಲನೆ

ಕುಮಟಾ: ಕುಮಟಾ ಮಾರ್ಗದಿಂದ ಅಘನಾಶಿನಿ ತೆರಳುವ ಜಿಲ್ಲಾ ಮುಖ್ಯರಸ್ತೆಯ ಅಭಿವೃದ್ದಿ ಕಾಮಗಾರಿಗೆ ಎಸ್.ಎಚ್.ಡಿ.ಪಿ ಪ್ಯಾಕೇಜ್ ಅಡಿಯಲ್ಲಿ ಅಂದಾಜು 3 ಕೋಟಿ 50 ಲಕ್ಷ ರೂಪಾಯಿ ಮಂಜೂರಿಯಾಗಿದ್ದು ಒಟ್ಟು 6 ಕಿ.ಮೀ ರಸ್ತೆಯ ಸುಧಾರಣೆಯಾಗಲಿದ್ದು ಶಾಸಕರಾದ ದಿನಕರ ಶೆಟ್ಟಿ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಈ ಭಾಗದಲ್ಲಿ ಅತ್ಯುತ್ತವಾದ ರಸ್ತೆ ನಿರ್ಮಾಣ ಮಾಡಲು 3 ಕೋಟಿ 50 ಲಕ್ಷ ರೂಪಾಯಿ ಮಂಜೂರಿಯಾಗಿದ್ದು ಕುಮಟಾ ಲೋಕೋಪಯೋಗಿ ಇಲಾಖೆಯವರು ಉತ್ತಮವಾದ ಕಾಮಗಾರಿಯನ್ನು ಮಾಡುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಯಾಕೆಂದರೆ, ಲೋಕೋಪಯೋಗಿ ಅಭಿಯಂತರರಾಗಿರುವ ಸುದರ್ಶನ ಹಾಗೂ ಅವರ ಟೀಮ್ ಅವರು ಕುಮಟಾದಲ್ಲಿ ಉತ್ತಮ ಕಾಮಗಾರಿ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ ಎಂದ ಅವರು, ಅಘನಾಶಿನಿ ಮತ್ತು ತದಡಿಗೆ ಹೋಗುವ ಬಾಜ್‌ಗೆ ದಕ್ಕೆ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಅನುದಾನ ಮಂಜೂರಿಯಾಗಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ತಾಲೂಕಾಧ್ಯಕ್ಷರಾದ ಹೆಮಂತ ಕುಮಾರ ಗಾಂವ್ಕರ್, ಕಾಗಲ್ ಗ್ರಾಮ ಪಂಚಾಯತ ಸದಸ್ಯರಾದ ದಿವಾಕರ ನಾಯ್ಕ, ಕುಮಾರ ಮಾರ್ಕಾಂಡೆ, ತಾ.ಪಂ ಮಾಜಿ ಸದಸ್ಯರಾದ ಜಗನ್ನಾಥ ನಾಯ್ಕ, ಹಾಗೂ ಇತರಿದ್ದರು.

ವರದಿ: ನಟರಾಜ ಗದ್ದೆಮನೆ ಕುಮಟಾ

error: