April 27, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ವಿನೂತನ ನೇಚರ್ ಕ್ಯಾಂಪ್

ಹಿರೇಗುತ್ತಿ: ಪರಿಸರದ ಪರಿಧಿಯೊಳಗೆ ಮನುಷ್ಯನ ಉದಯವಾಗಿ ಸಹಸ್ರ ಸಹಸ್ರ ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಮನುಷ್ಯ ಮನುಷ್ಯನಾಗದೇ ಸಾಗಿ ಬಂದ ಪಥದತ್ತ ಒಂದು ಪಕ್ಷಿನೋಟ ಹರಿಸುವುದಾದರೆ ‘ಮಾನವ ಪ್ರಕೃತಿಯ ಕೂಸು’ ಅನುಭವದ ಮಾತಿದು ಈ ಸ್ಥಾನ ಅವನಿಗೆ ಪ್ರಾಪ್ತಿಯಾಗಿರುವುದು ಅವನ ಮಾನವತೆಯಿಂದಲ್ಲ ಬದಲಾಗಿ ಪರಿಸರದ ಕೊಡುಗೆಯಿಂದ ವರದಿಂದ. ಮನುಷ್ಯ ಪ್ರಾಣಿ, ಮಾನವನಾಗುತ್ತ ಬಂದುದು ಪರಿಸರದ ಮಡಿಲಲ್ಲಿ, ಪ್ರಕೃತಿ ಮಾತೆಯ ಸೆರಗಲ್ಲಿ ಎಂಬAತೆ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳಿಗೆ ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರಕೃತಿ ಶಿಬಿರ (ನೇಚರ್ ಕ್ಯಾಂಪ್) ನಡೆಸುತ್ತಾ ಬಂದಿದೆ.
ಈ ಕ್ಯಾಂಪ್ ಹೊಸತನದಿಂದ ಕೂಡಿದ ವಿನೂತನ ಪ್ರಯೋಗ ಏಕೆಂದರೆ ಪ್ರಕೃತಿಯ ಕುರಿತು ಅಧ್ಯಯನ ಮಾಡಲು, ಪ್ರಕೃತಿಯನ್ನು ಉಳಿಸಿ, ಬೆಳೆಸುವ ಜಾಗೃತಿ ಮೂಡಿಸಲು ಹಾಗೂ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಪಾಠದಿಂದ ಹೊರಬಂದು ಪ್ರಕೃತಿಯ ಮಹತ್ವವನ್ನು ಅರಿಯಲು ವಿದ್ಯಾರ್ಥಿಗಳ ಮನಸ್ಸಿಗೆ ಮುದವನ್ನು ನೀಡಲು ಇಂತಹ ಶಿಬಿರಗಳು ಅತ್ಯವಶ್ಯಕ. ಅದೇ ರೀತಿ 2022-23 ನೇ ಸಾಲಿನಲ್ಲಿ ಪ್ರಕೃತಿ ಇಕೋ-ಕ್ಲಬ್ ವತಿಯಿಂದ ಸಂದೀಪ ನಾಯಕ ಹಾಗೂ ನಾಗರಾಜ ನಾಯಕ ಆಂದ್ಲೆ ಅವರ ತೋಟದಲ್ಲಿ ಪ್ರಕೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರ ಮೇಲುಸ್ತುವಾರಿಯಲ್ಲಿ ಪ್ರಕೃತಿ ಶಿಬಿರದಲ್ಲಿ 3 ತಂಡಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ಸೂಪರ್ ಮಿನಿಟ್, ಹಗ್ಗ ಜಗ್ಗಾಟ, ಗಡಿಗೆ ಒಡೆಯುವುದು, ಪಿರಾಮಿಡ್ ರಚÀನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ನಾಗರಾಜ ಜಿ ನಾಯಕ ಉಸ್ತುವಾರಿಯಲ್ಲಿ ಶಿಸ್ತಿನಿಂದ ಅಚ್ಚುಕಟ್ಟಾಗಿ ನೆರವೇರಿಸಿಲಾಯಿತು.
ವಿದ್ಯಾರ್ಥಿಗಳು ಗೊಲ್ಲರು, ಬೇಡರು ಮತ್ತು ಕೊಂಗರು ಎಂಬ ಮೂರು ತಂಡಗಳನ್ನು ರಚಿಸಿ ಭಾಗವಹಿಸಲು ಅವಕಾಶ ನೀಡಲಾಯಿತು. ಕೊಂಗರು ತಂಡದ ನಾಯಕರಾದ ಸುಜನ ಅಂಬಿಗ ಮತ್ತು ಪದ್ಮಾವತಿ ಗೌಡ ಪ್ರಥಮ ಸ್ಥಾನ, ಗೊಲ್ಲರು ತಂಡದ ನಾಯಕರಾದ ಸಂಜಯ ಹಳ್ಳೇರ ಮತ್ತು ಪ್ರತಿಮಾ ಗೌಡ ದ್ವಿತೀಯ ಸ್ಥಾನ, ಬೇಡರು ತಂಡದ ನಾಯಕರಾದ ಎಮ್.ಜಿ ನಾಗಭೂಷಣ ಮತ್ತು ಕಾಂಚಿಕಾ ನಾಯಕ ತೃತೀಯ ಸ್ಥಾನ ಪಡೆದರು. ಈ ಮೂರು ತಂಡದ ನಾಯಕರಿಗೆ ಬಹುಮಾನ ನೀಡಲಾಯಿತು..

   ಹೈಸ್ಕೂಲ್‌ಗೆ ಧ್ವನಿವರ್ಧಕ ದೇಣಿಗೆ ನೀಡಿದ ಸುಬ್ರಾಯ ಬೊಮ್ಮಯ್ಯ ನಾಯಕ ಖಂಡಗಾರ ಅವರನ್ನು ಸನ್ಮಾನಿಸಿದ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ     ಶ್ರೀ ಶ್ರೀಕಾಂತ ನಾಯಕ ಮಾತನಾಡಿ “ಸುಬ್ರಾಯ ನಾಯಕರ ಸಾಮಾಜಿಕ ಸೇವೆ ನಿರಂತರವಾಗಿರಲಿ, ಪ್ರತಿ ವರ್ಷವೂ ಪ್ರಕೃತಿ ಇಕೋ-ಕ್ಲಬ್ ವತಿಯಿಂದ ನೇಚರ್ ಕ್ಯಾಂಪ್ ಮಾಡುವುದು ನಮ್ಮ ಶಾಲೆಯ ವಿಶೇಷವಾಗಿದೆ. ನಾವೆಲ್ಲ ಪರಿಸರದ ಮಕ್ಕಳು ಎಂಬುದೇ ನಿಜವಾದರೆ ಬೇರೆಯವರನ್ನು ಕಾಯುವ ಪ್ರಶ್ನೆಯಿಲ್ಲ. ಮಾತಿಗಿಂತ ಕೃತಿ ಮೇಲು ಅದಕ್ಕಾಗಿ ಕಾಡು ಬೆಳೆಸುವುದು, ನೈರ್ಮಲ್ಯ ಕಾಪಾಡುವುದು ಹೀಗೆ ಯಾವೆಲ್ಲ ಕ್ರಮ ಅಗತ್ಯವಿದೆಯೋ ಅವೆಲ್ಲವನ್ನು ವಿದ್ಯಾರ್ಥಿಗಳು ಯುವಕರೂ ಆದ ನಾವು ಹಿರಿಯರ ಮಾರ್ಗದರ್ಶನದಲ್ಲಿ ಕೈಗೊಳ್ಳಬೇಕಿದೆ, ಅಂದಾಗ ಮಾತ್ರ  ‘ಒeಟಿ mಚಿಥಿ be ಛಿಡಿueಟ buಣ mಚಿಟಿ is ಞiಟಿಜ’ ಎಂಬ ನಾಣ್ಣುಡಿ ಅರ್ಥ ಪೂರ್ಣವಾಗುವುದು” ಎಂದರು.
    ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ರಮಾನಂದ ಜಿ ಪಟಗಾರ ಈ ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನ ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ವಿದ್ಯಾರ್ಥಿ ತಂಡಗಳಿAದ ವಿವಿಧ ಮನೋರಂಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದವು.
    ಈ ಕ್ಯಾಂಪ್ ಯಶಸ್ವಿಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಮುಂಜಾನೆಯ ಚಹಾ ತಿಂಡಿ ವ್ಯವಸ್ಥೆ ಮಾಡಿದ ಶಿಕ್ಷಕರಾದ ಬಾಲಚಂದ್ರ ನಾಯಕ ಹಾಗೂ ಬಾಲಚಂದ್ರ ಅಡಿಗೋಣ, ಬಹುಮಾನ ಪ್ರಾಯೋಜಕತ್ವ ವಹಿಸಿದ ಶ್ರೀಕಾಂತ ನಾಯಕ, ಯಶೋದಾ ಶಾಂತಾ ನಾಯಕ, ಜಗದೀಶ(ಪಪ್ಪು) ನಾಯಕ, ಗುರುರಾಜ ನಾಯಕರಿಗೆ ಧ್ವನಿವರ್ಧಕ ದೇಣಿಗೆ ನೀಡಿದ ಸುಬ್ರಾಯ ನಾಯಕ, ಊಟದ ವ್ಯವಸ್ಥೆ ಮಾಡಿದ ಹೈಸ್ಕೂಲಿನ ಎಲ್ಲಾ ಶಿಕ್ಷಕ ವೃಂದದವರಿಗೆ, ಸ್ಥಳಾವಕಾಶ ನೀಡಿದ ಸಂದೀಪ ನಾಯಕ ಹಾಗೂ ನಾಗರಾಜ ನಾಯಕರಿಗೆ, ಹಗ್ಗಜಗ್ಗಾಟದ ಸಂಪೂರ್ಣ ವ್ಯವಸ್ಥೆ ಮಾಡಿದಂತಹ  ತಿಮ್ಮಣ್ಣ ಗೌಡರಿಗೆ ಸಹಕರಿಸಿದ ಸರ್ವರಿಗೂ ಪ್ರಕೃತಿ ಇಕೋಕ್ಲಬ್‌ನ ಮಾರ್ಗದರ್ಶಕ ಶಿಕ್ಷಕರಾದ ಮಹಾದೇವ ಬಿ ಗೌಡ ಧನ್ಯವಾದ ಅರ್ಪಿಸಿದರು.
  ಕಾರ್ಯಕ್ರಮದಲ್ಲಿ ಜಯರಾಮ ನಾಯಕ ಆಂದ್ಲೆ ಹಾಗೂ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ನಾಗರಾಜ ಜಿ ನಾಯಕ, ಬಾಲಚಂದ್ರ ವಿ ಹೆಗಡೇಕರ್, ಎನ್.ರಾಮು ಹಿರೇಗುತ್ತಿ,  ಜಾನಕಿ ಗೊಂಡ, ಶಿಲ್ಪಾ ನಾಯಕ, ಇಂದಿರಾ ನಾಯಕ, ಬಾಲಚಂದ್ರ ಅಡಿಗೋಣ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಅಡುಗೆ ಸಿಬ್ಬಂದಿಗಳು, ಆಂದ್ಲೆ ಊರಿನ ನಾಗರಿಕರು ಉಪಸ್ಥಿತರಿದ್ದರು.
    “ಈ ಲೋಕ ನಾಕವಾಗಬೇಕೇ ಹೊರತು ನರಕವಾಗಬಾರದು” ಎಂದಾದರೆ ಬನ್ನಿ ಪರಿಸರವನ್ನು ರಕ್ಷಿಸೋಣ ಎಂಬAತೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು. ಈ ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳು, ಆಂದ್ಲೆ ಊರಿನ ನಾಗರಿಕರು ಪಡೆದುಕೊಂಡರು.
error: