May 14, 2024

Bhavana Tv

Its Your Channel

ಮುರುಡೇಶ್ವರದ ಆರ್. ಎನ್. ಎಸ್. ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ

ಮುರುಡೇಶ್ವರದ ಆರ್. ಎನ್. ಎಸ್. ರೂರಲ್ ಪಾಲಿಟೆಕ್ನಿಕ್, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೧೩ .೧೨. ೨೦೨೧ ರಂದು ಅಪರಾಧ ತಡೆ ಮಾಸಾಚರಣೆ ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಚಾರ್ಯರಾದ ಕೆ . ಮರಿಸ್ವಾಮಿಯವರು ವಹಿಸಿಕೊಂಡು ಮಾತನಾಡುತ್ತ, ಇಂದಿನ ಆಧುನಿಕ ಯುಗದಲ್ಲಿ ನವೀನ ತಂತ್ರಜ್ಞಾನ ಬೆಳದಂತೆ ಅದರ ಜೊತೆಗೆ ದಿನನಿತ್ಯ ಹೊಸಬಗೆಯ ಸೈಬರ್ ಅಪರಾಧಗಳು ಸಮಾಜದಲ್ಲಿ ಘಟಿಸುತ್ತಿವೆ, ಇವುಗಳ ತಡೆಗೆ ಪೊಲೀಸರ ಜೊತೆಗೆ ಕೈಜೋಡಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆದ್ಯ ಕರ್ತವ್ಯವಾಗಿದೆ ತಿಳಿಸಿದರು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ಗ್ರಾಮೀಣ, ಮುರುಡೇಶ್ವರ, ಮಂಕಿ ವಿಭಾಗದ ಪೊಲೀಸ್ ವೃತ್ತ ನಿರೀಕ್ಷಕರಾದ ಮಹಾಬಲೇಶ್ವರ ನಾಯ್ಕ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಅಪರಾಧ ತಡೆಗಟ್ಟುವ ಕುರಿತು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ವಿದ್ಯಾರ್ಥಿಗಳು ಜ್ಞಾನವನ್ನು ವೃದ್ಧಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ದೇಶ ಸೇವೆ ಸಲ್ಲಿಸುವಂತ, ಉತ್ತಮ ಪ್ರಜೆಗಳಾಗಿ ಎಂದು ತಿಳಿಸಿದರು .
ಮುರುಡೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಮಾನಂದ ಕೊಣ್ಣೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.ಮುರ್ಡೇಶ್ವರ ಪೊಲೀಸ್ ಠಾಣೆಯ ಹವಾಲ್ದಾರ್ ರಾಜು ನಾಯ್ಕ ಎಲ್ಲರಿಗೂ ವಂದಿಸಿದರು.

error: