April 26, 2024

Bhavana Tv

Its Your Channel

ಮುರುಡೇಶ್ವರ ಆರ್. ಎನ್ .ಎಸ್. ಪಾಲಿಟೆಕ್ನಿಕ್ ಗೆ ರಾಜ್ಯಮಟ್ಟದ ಡಿಪ್ಲೋಮಾ ಘಟಿಕೋತ್ಸವ ಸಮಾರಂಭದಲ್ಲಿ ಮೂರು ರ‍್ಯಾಂಕ್ ಗಳ ಗೌರವ

ಮುರುಡೇಶ್ವರ:- ನಾಲ್ವಡಿ ಕೃಷ್ಣರಾಜ ಒಡೆಯರ್ ಘಟಿಕೋತ್ಸವ ಡಿಪ್ಲೋಮಾ 2022 ನವಂಬರ್ 2 ರಂದು ಬ್ಯಾಂಕ್ವೆಟ್ ಹಾಲ್ ವಿಧಾನಸೌಧ ಬೆಂಗಳೂರಿನಲ್ಲಿ ವಿಜೃಂಭಣೆಯಿAದ ಜರುಗಿತು.

ಈ ಸಮಾರಂಭದಲ್ಲಿ 45 ವಿವಿಧ ಕೋರ್ಸ್ ನಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವರಾದ ಸಿ. ಅಶ್ವಥ್ ನಾರಾಯಣ್ ರವರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಹಾಗೂ ಚಿನ್ನ, ಬೆಳ್ಳಿ ,ಕಂಚಿನ ಪದಕ ನೀಡಿ ಗೌರವಿಸಿದರು.
ಈ ಸಮಾರಂಭದಲ್ಲಿ ಮುರುಡೇಶ್ವರ ಆರ್. ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನ ಸಿರಾಮಿಕ್ ಟೆಕ್ನಾಲಜಿ ವಿಭಾಗಕ್ಕೆ ಮೂರು ರ‍್ಯಾಂಕ್‌ಗಳು ದೊರೆತಿದ್ದು ,ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದ ರೂಜಾರಿಯೋ ಡಿಸೋಜ, ಬೆಳ್ಳಿಯ ಪದಕದೊಂದಿಗೆ ಎರಡನೇ ರ‍್ಯಾಂಕ್ ಪಡೆದ ಸಿದ್ದಲಿಂಗ, ಹಾಗೂ ಕಂಚಿನ ಪದಕದೊಂದಿಗೆ ಮೂರನೇ ರ‍್ಯಾಂಕ್ ಪಡೆದ ಚರಣ್ ರಾಜ್ ಎಸ್,ಈ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಜೆ .ಎಸ್. ಡಬ್ಲ್ಯೂ ಸ್ಟೀಲ್ ಕಂಪನಿಯಲ್ಲಿ, ಮತ್ತೊಬ್ಬರು ಹೈದರಾಬಾದ್ ಗ್ಲಾಸ್ ಕಂಪನಿಯಲ್ಲಿ ಕೆಲಸ ದೊರೆತಿರುತ್ತದೆ ಎಂದು ಉದ್ಯೋಗಾಧಿಕಾರಿಗಳು/ ಸಿರಾಮಿಕ್ ವಿಭಾಗದ ಮುಖ್ಯಸ್ಥರು ಹಾಗೂ ಉಪ ಪ್ರಾಚಾರ್ಯರು ಆದ ಕೆ. ಮರಿಸ್ವಾಮಿಯವರು ಮಾಹಿತಿ ನೀಡಿದ್ದಾರೆ.
ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಚಾರ್ಯರಾದ ಸಂತೋಷ್ ಆರ್. ಎ. ಆಡಳಿತಾ ಧಿಕಾರಿಗಳಾದ ದಿನೇಶ್ ಗಾವ್ಕರ್ ,ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹರ್ಷವನ್ನ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

error: