ಮುರ್ಡೇಶ್ವರ ; ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜು ಮುಡೇಶ್ವರದ ರಾಷ್ಟ್ರೀಯಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಸೇವಾಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳದ ಹಿರಿಯ ಪತ್ರಕರ್ತರು,ಯಕ್ಷಗಾನ ಹವ್ಯಾಸಿ ಕಲಾವಿದರಾದ ಸುಬ್ರಹ್ಮಣ್ಯ ಭಟ್ ದಾಸನಕುಡಿಕೆಯವರು ಮಾತನಾಡಿ ದೇಶ ನಮಗೇನು ಕೊಟ್ಟದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯವಾಗಿದೆ. ದೇಶ ಸೇವೆ ಮಾಡಲು ಹಲವು ಮಾರ್ಗಗಳಿವೆ. ಆದರಲ್ಲಿ ರಾಷ್ಟ್ರೀಯ ಸೇವಾಯೋಜನಾ ಘಟಕ ಮುಖ್ಯ ಪಾತ್ರವಹಿಸುತ್ತದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ದಿನೇಶ ಗಾಂವ್ಕರ ರವರುಮಾತನಾಡಿ ಅರಿವೆ ನಮ್ಮ ಗುರು ಪ್ರತಿಯೊಬ್ಬರು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಶ್ರಮ್ರಕ್ಕೆ ಬೆಲೆ ಕೊಟ್ಟು ಬದುಕಿ ಜೀವನ ಸಾರ್ಥಕಗೊಳಿಸಿ ಕೊಳ್ಳಬೇಕೆಂದರು ಹಾಗೂ ವಿದ್ಯಾರ್ಥಿ ಜೀವನ ಒಂದು ಸುಂದರ ಕ್ಷಣ ಇಂತಹ ವಿಶೇಷ ಶಿಬಿರದ ಅನುಭವಗಳನ್ನು ಕಟ್ಟಿಕೊಳ್ಳಲುವಿದ್ಯಾರ್ಥಿಗಳಿಗೆ ಸಹಕಾರಿಯಾಗುವುದು ಎಂದರು.
ಯೋನಾಧಿಕಾರಿಗಳಾದ ಗಣಪತಿ ಕಾಯ್ಕಿಣಿಯವರು ಮಾತನಾಡಿ ವಿದ್ಯಾರ್ಥಿಗಳು ಸಮರ್ಪಣಾಭಾವವನ್ನು ಬದುಕಿನಲ್ಲಿ ಬೆಳಸಿಕೊಂಡು ನನಗಾಗಿ ಅಲ್ಲ ನಿನಗೆ ಎಂಬ ದ್ಯೇಯದೊಂದಿಗೆ ದೇಶ ಕಾಯುವ ಆಂತರಿಕ ಸೈನಿಕನಾಗಿ ಶಿಸ್ತು ಸಂಯಮ,ತಾಳ್ಮೆ,ಶ್ರಮದ ಮಹತ್ವವನ್ನ ಅರಿತುಕೊಳ್ಳಲು ಇಂತಹ ಶಿಬಿರಗಳು ಉಪಯುಕ್ತ ಎಂದರು. ವೇದಿಕೆಯಲ್ಲಿ ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎಂಪಿ ಭಂಡಾರಿ, ಉಪನ್ಯಾಸಕ ಕೃಷ್ಣ ಹೆಗಡೆ, ಸಂಯೋಜನಾಧಿಕಾರಿ ಗಣೇಶ ನಾಯ್ಕ ಹಾಜರಿದ್ದರು. ಕುಮಾರಿ ಸುಪ್ರಿತಾ ನಾಯ್ಕ ನಿರೂಪಣೆ ಮಾಡಿ, ಕುಮಾರಿ ರಕ್ಷಿತಾ ಸ್ವಾಗತಿಸಿ, ಕುಮಾರಿ ಚೇತನಾ ನಾಯ್ಕ ವಂದನಾರ್ಪಣೆಗೈದಳು.
ಸಭಾಕಾರ್ಯಕ್ರಮದ ನಂತರ ಶ್ರೀಮುರುಡೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಇದರಿಂದ ‘ಪಂಚವಟಿ ‘ ಯಕ್ಷಗಾನ ತಾಳ ಮದ್ದಳೆ ನಡೆದು ಯಕ್ಷರಸದೌತಣ ಉಣಬಡಿಸಿದರು.
More Stories
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ:
ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ: