April 26, 2024

Bhavana Tv

Its Your Channel

ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಗೆ ಹೊಸ ಅಂಬ್ಯುಲೆನ್ಸ್ ಲೋಕಾರ್ಪಣೆ

ಶಿರಾಲಿ:- ಶ್ರೀ ಎಸ್.ವಿ.ಸಂಕನೂರು, ಮಾನ್ಯ ವಿಧಾನ ಪರಿಷತ್ ಸದಸ್ಯರು ಇವರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಶಿರಾಲಿಗೆ ಮಂಜೂರಾದ ಹೊಸ ಅಂಬ್ಯುಲೆನ್ಸನ್ನು ಇಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ದ ಶಾಸಕ ಸುನೀಲ್ ನಾಯ್ಕ, ಅವರು ಉದ್ಘಾಟಿಸಿ ಜನರ ಸೇವೆಗಾಗಿ ಲೋಕಾರ್ಪಣೆ ಮಾಡಿದರು.

ತುರ್ತು ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆ, ಭಟ್ಕಳ ಅಥವಾ ಖಾಸಗಿ ಅಂಬ್ಯುಲೆನ್ಸನ್ನೆ ನಂಬಿಕೊಂಡಿರುವ ಶಿರಾಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸಮುದಾಯ ಆರೋಗ್ಯ ಕೇಂದ್ರ, ಶಿರಾಲಿಗೆ ಅಂಬ್ಯುಲೆನ್ಸನ್ನು ನೀಡಿ ಬಹುದಿನದ ಕನಸನ್ನು ನನಸಾಗಿಸಿದ ಎಸ್.ವಿ.ಸಂಕನೂರು, ಮಾನ್ಯ ವಿಧಾನ ಪರಿಷತ್ ಸದಸ್ಯರು , ಇವರಿಗೂ ಹಾಗೂ ಇದನ್ನು ತರುವಲ್ಲಿ ಅವಿರತ ಪರಿಶ್ರಮ ಮಾಡಿದ ಶಾಸಕ ಸುನೀಲ್ ನಾಯ್ಕ ಇವರಿಗೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಬಾಲಚಂದ್ರ ಮೇಸ್ತ ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ

error: