April 27, 2024

Bhavana Tv

Its Your Channel

ಆಟೋ ಚಾಲಕರಿಂದ ಹೋಳಿ ಹಣ, ಸ್ನೇಹ ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ

ಶಿರಾಲಿ:- ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕಂದ್ರೆ ಇಂತಹದೇ ಸಮಯ ಬೇಕು ಅಂತ ಇಲ್ಲ ಸಿಕ್ಕ ಸಂದರ್ಭವನ್ನು ಒಳ್ಳೆಯ ಸಂದರ್ಭದಲ್ಲಿ ಉಪಯೋಗಿಸಬೇಕು ಇದಕ್ಕೆ ಒಂದು ಉತ್ತಮ ಉದಾಹರಣೆ. ನಮ್ಮ ಶಿರಾಲಿಯ ಆಟೋ ಚಾಲಕರು ಹೌದು ವೀಕ್ಷಕರೇ ಹೋಳಿ ಹಬ್ಬವನ್ನು ಕೆಲವರು ಮೋಜು ಮಸ್ತಿ ಮಾಡಿ ಕಳೆದರೆ ಇನ್ನು ಕೆಲವರು ಹಲವರಿಗೆ ಆದರ್ಶ ಪ್ರಾಯ ರಾಗುತ್ತಾರೆ ಇದಕ್ಕೆ ಒಂದು ಉತ್ತಮ ಉದಾಹರಣೆ ಭಟ್ಕಳ ತಾಲೂಕಿನ ಶಿರಾಲಿಯ ಗ್ರಾಮದ ಆಟೋ ಚಾಲಕರು ಹೋಳಿ ಹಬ್ಬದಂದು ಜನಸಾಮಾನ್ಯರಿಂದ ಸ್ನೇಹ ಪೂರ್ವಕವಾಗಿ ಸಂಗ್ರಹಿಸಿದ ಹಣವನ್ನು ದುಂದು ವೆಚ್ಚ ಮಾಡದೆ ಅದನ್ನು ಸ್ನೇಹ ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಿದ್ದಾರೆ.
ಇವರ ಈ ಕಾರ್ಯವನ್ನು ಭಟ್ಕಳ ತಾಲೂಕಿನ ಎಲ್ಲಾ ಆಟೋ ಚಾಲಕಮಾಲಕರು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.

error: