ಶಿರಸಿ: ಸ್ಥಳೀಯ ಸಬ್ಜೈಲ್ ಮತ್ತೆ ಬಂದ್. . . . . ! ಶಾಶ್ವತ ಸಬ್ಜೈಲನ್ನಾಗಿ ಹೊಸದಾಗಿ ಕಟ್ಟಿರುವ ಅಬಕಾರಿ ಇಲಾಖೆಯನ್ನ ಸಬ್ಜೈಲನ್ನಾಗಿ ಪರಿವರ್ತನೆಗೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ. ಶಿರಸಿಯಲ್ಲಿ ೧೦ ಕೋಟಿ ವೆಚ್ಚದಲ್ಲಿ ಇನ್ನೊಂದು ಸರಕಾರಿ ಕಚೇರಿಗಳ ಸಂಕೀರ್ಣ ಕಟ್ಟಡ ಹಾಲಿ ಇರುವ ಸಬ್ಜೈಲ್ ಕ್ಷೇತ್ರದಲ್ಲಿ ಕಟ್ಟುವ ಹಿನ್ನೆಲೆಯಲ್ಲಿ ಸಬ್ಜೈಲ್ ಬಂದಾಗುವ ಸಂಭವವಿರುವುದರಿAದ ಇದ್ದು ಇಲ್ಲದಂತೆ ಆಗಿರುವ ಹಾಗೂ ಅನಧೀಕೃತ ಸಾರಾಯಿ ನಿಯಂತ್ರಣದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ವೈಫಲ್ಯ ಆಗಿರುವುದರಿಂದ ನ್ಯಾಯಾಲಯದ ಪಕ್ಕದಲ್ಲಿರುವ ಸದ್ರಿ ಕಟ್ಟಡ ಅಬಕಾರಿ ಇಲಾಖೆಕ್ಕಿಂತ ಸಬ್ಜೈಲಿಗೆ ಹೆಚ್ಚು ಉಪಯುಕ್ತವಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಬಕಾರಿ ಇಲಾಖೆಯ ಹೊಸ ಕಟ್ಟಡವನ್ನ ಶಾಶ್ವತವಾಗಿ ಸಬ್ಜೈಲನ್ನಾಗಿ ಪರಿವರ್ತಿಸಲು ಅಗ್ರಹಿಸಿದ್ದಾರೆ.
ಈಗಾಗಲೇ ಸಿದ್ಧಾಪುರ, ಯಲ್ಲಾಪುರ ಮತ್ತು ಕುಮಟ ಸಬ್ಜೈಲ್ಗಳು ಬಂದಾಗಿ ಕಾರವಾರ ಜೈಲ್ನಲ್ಲಿ ಆರೋಪಿತರ ಸಂಖ್ಯೆಗೆ ಒತ್ತಡ ಹೆಚ್ಚಾಗಿರುವುದರಿಂದ ಮತ್ತೆ ಶಿರಸಿ ಸಬ್ಜೈಲ್ ಬಂದಾಗುವುದರಿAದ ಕೋವೀಡ್ ಸಂದರ್ಭದಲ್ಲಿನ ಕಾರವಾರ ಜೈಲಿನ
ಒತ್ತಡ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳುತ್ತಾ ಬದ್ರತೆ, ಬಂದೋಬಸ್ತ, ಆರೋಪಿಗಳ ಸಾಗಾಟ, ಕಡಿಮೆ ಪೋಲೀಸ್ ಸಿಬ್ಬಂದಿಯ ಅವಶ್ಯಕತೆ ಮುಂತಾದ ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಅಬಕಾರಿ ಕಟ್ಟಡ ಸಬ್ಜೈಲಿಗೆ ಸೂಕ್ತವಾದ ಸ್ಥಳವೆಂದು ಹೇಳಿದ್ದಾರೆ.
ಹಿಂದೆಯೂ ೮ ವರ್ಷ ಬಂದ್:
ಈ ಹಿಂದೆಯೂ ೨೦೦೬ ರಿಂದ ೧೪ ರವರೆಗೆ ಶಿರಸಿ ಸಬ್ಜೈಲ್ ಸೂಕ್ತ ಬದ್ರತೆಗಳ ಕಟ್ಟಡಗಳ ಕೊರತೆಯಿಂದ ಬಂದಾಗಿದ್ದು
ಶಿರಸಿ ವಕೀಲ ಸಂಘವು ಕರ್ನಾಟಕ ಉಚ್ಛ ನ್ಯಾಯಾಲಯ ಸಂಚಾರಿಪೀಠ ಧಾರವಾಡದಲ್ಲಿ ರಿಟ್ಪೀಟಿಷನ್ ದಾಖಲಿಸಿದ ಹಿನ್ನೆಲೆಯಲ್ಲಿ ಶಿರಸಿ ಸಬ್ಜೈಲ್ ೮ ವರ್ಷಗಳ ನಂತರ ಪುನರ್ ಕಾರ್ಯ ಪ್ರಾರಂಭಿüಸಿತ್ತು ಎಂಬುದನ್ನು ಸ್ಪಷ್ಟನೆ ಹೊಂದಿರುವುದನ್ನು ನನೆನಪಿಸಿಕೊಳ್ಳಬಹುದಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ