May 17, 2024

Bhavana Tv

Its Your Channel

ಘಟನೆ ನಡೆದ ೧೬ ಗಂಟೆಗಳ ಒಳಗಾಗಿ ಮೃತರ ಕುಟುಂಬಕ್ಕೆ ೫ ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ವಿತರಣೆ ಮಾಡಿದ ಕಾರ್ಮಿಕ ಇಲಾಖೆಯ ಸಚಿವರು

ಶಿರಸಿ : ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಯಶೋದಾ ಬಂಗಾರ ಗೌಡ ಮೃತಪಟ್ಟ ಅಹಿತಕರ ಘಟನೆ ನಿನ್ನೆ ನಡೆದಿದ್ದು ಮಾನ್ಯ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರವರು ಭೇಟಿ ನೀಡಿ ಮುಂದಿನ ೪೮ ಗಂಟೆಗಳ ಒಳಗಾಗಿ ಪರಿಹಾರ ಧನವನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಘಟನೆ ನಡೆದ ೧೬ ಗಂಟೆಗಳ ಒಳಗಾಗಿ ಖುದ್ದಾಗಿ ತಾವೇ ಮೃತರ ಮನೆಗೆ ಭೇಟಿ ನೀಡಿ ಸುಮಾರು ೫ ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಘಟನೆ ನಡೆದ ೧೬ ಗಂಟೆಗಳ ಒಳಗಾಗಿ ಮೃತರ ಕುಟುಂಬಕ್ಕೆ ಸಚಿವರು ಸಹಾಯಧನವನ್ನು ನೀಡಿರುವುದರ ಬಗ್ಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವರದಿ.:-ವೇಣುಗೋಪಾಲ ಮದ್ಗುಣಿ..

error: