May 17, 2024

Bhavana Tv

Its Your Channel

ಜಿಲ್ಲಾಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಸಿರಸಿ:- ತಾಲೂಕು ಫೋಟೋ ಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಜಿಲ್ಲಾಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆತು ಸುಮಾರು ೭೫ ಕ್ಕೂ ಹೆಚ್ಚಿನ ಛಾಯಾಚಿತ್ರಗಳು ಬಂದಿದ್ದವು . ಸುಮಾರು ೩೦ಕ್ಕೂ ಹೆಚ್ಚಿನ ಛಾಯಚಿತ್ರಗಳು ನಾವು ನಿರ್ಧರಿಸಿದ ಅಳತೆಯಲ್ಲಿ ಇರದ ಕಾರಣ ಉತ್ತಮವಾಗಿದ್ದರೂ, ತಿರಸ್ಕೃತಗೊಂಡು ಅಂತಿಮವಾಗಿ ಸ್ಪರ್ಧೆಗೆ ಉತ್ತಮವಾದ ೪೫ ಛಾಯಾಚಿತ್ರಗಳನ್ನು ಪರಿಗಣಿಸಲಾಯಿತು. ಛಾಯಾಗ್ರಾಹಕ ರವಿ ಹಿರೇಮಠ, ಸುಧೀರ ಶಾನಭಾಗ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.ಸಾಗರ ಭವಾನಿ ಶಂಕರ ನಾಯ್ಕ ೫೦೦೦.೦೦ ಮತ್ತು ಪ್ರಶಸ್ತಿ, ಸಂದೀಪ ನಾಯ್ಕ ದ್ವಿತೀಯ , ಲೋಕೇಶ ಶ್ರೀಧರ ನಾಯ್ಕ ತೃತಿಯ ಬಹುಮಾನ ಪಡೆದರು. ಮೋಹನ ಶ್ರೀಧರ ನಾಯ್ಕ,ಬೀರಣ್ಣಾ ನಾಯಕ ಮೊಗಟಾ, ಚೇತನ ಗಣಪತಿ ನಾಯ್ಕ, ಸಮಾಧಾನಕರ ಪ್ರಶಸ್ತಿ ಪಡೆದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿಯ ಅಧ್ಯಕ್ಷರಾದ ರಾಜು ಕಾನಸೂರವರು ಮಾತನಾಡಿ ವಿಶ್ವ ಛಾಯಾ ಚಿತ್ರ ದಿನಾಚರಣೆ ಅಂಗವಾಗಿ ಫೋಟೋ ಗ್ರಾಪರ್ಸ ಅಸೋಸಿಯೇಷನ್ ವತಿಯಿಂದ ನಡೆಸಲಾದ ಜಿಲ್ಲಾ ಮಟ್ಟದ ಛಾಯಾಚಿತ್ರದ ಸ್ಪರ್ಧೆಗೆ ಉತ್ತಮವಾದ ಪ್ರತಿಕ್ರಿಯೆ ಬಂದಿದೆ ಎಂದರು.ಪೆನಾಸೋನಕ್ ಸಂಸ್ಥೆಯ ಚೇತನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.ನಂತರ ಪೆನಾಸಾನಿಕ್ ಕ್ಯಾಮರಾಗಳ ಕಾರ್ಯಾಗಾರ ನಡೆಯಿತು

ವರದಿ:ವೇಣುಗೋಪಾಲ ಮದ್ಗುಣಿ

error: