May 17, 2024

Bhavana Tv

Its Your Channel

ವೃದ್ಧಾಶ್ರಮದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಶಿರಸಿ:ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು(ರಿ) ಶಿರಸಿ ಜಿಲ್ಲಾ ಸಮಿತಿಯು ಸುಯೋಗ ವೃದ್ಧಾಶ್ರಮದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಶಿರಸಿಯಿAದ ಕೂಗಳತೆ ದೂರದಲ್ಲಿ ನಿಶ್ಯಬ್ದ, ಪ್ರಶಾಂತ ವಾತಾವರಣದಲ್ಲಿ ಶಾಂತಿಯ ಸಂಕೇತವಾದ ಆಶ್ರಮದ ವಿಮಲಾ ಭಾಗ್ವತ ಅವರ ಶ್ರೀ ರಾಮನ ಸ್ತುತಿಯೊಂದಿಗೆ ಆರಂಭಿಸಲಾಯಿತು. ಅಬಾಸಾಪ ಕಾರ್ಯದರ್ಶಿ ಕೃಷ್ಣ ಪದಕಿ ಗಣ್ಯರನ್ನು ತುಂಬು ಹೃದಯದಿಂದ ಸ್ವಾಗತಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ವಿದ್ವಾನ್ ಸುಪ್ರತೀಕ ಭಟ್ ನೀರಾಗನ ಅವರು ಬದುಕಿನ ಪಾರಮಾರ್ಥಿಕ ಸತ್ಯವನ್ನು ತಮ್ಮ ಪ್ರವಚನದಲ್ಲಿ ತಿಳಿಸಿದರು. ಮಾಧವನಿಂದಲೆ ಮಾನವ. ಪುನಃ ಸತ್ಕರ್ಮಗಳು ಮೂಲಕ ಮಾಧವನನ್ನೆ ಸೇರಬೇಕು. ನಿಷ್ಕಲ್ಮಶ ಭಾವನೆಗಳಿಂದ ಭಗವಂತನನ್ನು ಆರಾಧಿಸಬೇಕು ಎಂದರು. ಗೌರವ ಉಪಸ್ಥಿತಿಯಲ್ಲಿ ಅಭಾಸಾಪ ರಾಜ್ಯ ಸಮಿತಿ ಸದಸ್ಯರಾದ ಜಗದೀಶ ಭಂಡಾರಿಯವರು ಮಾತನಾಡುತ್ತಾ ಕವಿ ಜಿ ಎಸ್ ಶಿವರುದ್ರಪ್ಪ ಅವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ…. ಕವನದ ಅರ್ಥವನ್ನು ಸುಯೋಗ ಆಶ್ರಮದಲ್ಲಿ ಕಾಣಬಹುದಾಗಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಡಿಸಿದರು. ಮತ್ತೋರ್ವ ಉಪಸ್ಥಿತ ಜಯಪ್ರಕಾಶ ಹಬ್ಬು ಅವರು ಮಾತನಾಡಿ ಸುಯೋಗ ವೃದ್ಧಾಶ್ರಮದ ಸತ್ಕಾರ್ಯದಲ್ಲಿ ನಿರತವಾಗಿರುವ ಲಥಿಕಾ ಭಟ್ಟ ಅವರು ನಮ್ಮ ತಾಯಿಯ ಕರುಣೆ, ಸಹೋದರಿಯ ಭಾವ ಹೊಂದಿದ್ದಾರೆ. ಭಗವಂತ ಇವರನ್ನು ಸೇವೆಗಾಗಿ ಸೃಷ್ಟಿ ಮಾಡಿದ್ದಾರೆ ಎನ್ನುವ ಅಭಿಪ್ರಾಯ ತಿಳಿಸಿದರು.
ವೃದ್ಧಾಶ್ರಮ ಸಂಚಾಲಕಿ ಲಥಿಕಾ ಭಟ್ಟ ಅವರು ಸನ್ಮಾನ ಸ್ವೀಕರಿಸಿ ಚಿಕ್ಕಂದಿನಲ್ಲಿ ತಂದೆಯಿAದ ಕಲಿತ ಲಲಿತಾ ಸಹಸ್ರಾಮ ನನಗೆ ಈ ಶಕ್ತಿಯನ್ನು ನೀಡಿದೆ. ಈ ಕಾರ್ಯದಲ್ಲಿ ನನ್ನ ಕುಟುಂಬವೇ ನನ್ನ ಸಹಾಯಕ್ಕೆ ನಿಂತಿದೆ. ಇದು ನನ್ನ ಮನೆಯಲ್ಲ ನನ್ನ ಪಾಲಿಗೆ ದೇವಸ್ಥಾನ ಎಂದು, ಸುಯೋಗ ಆಶ್ರಮದ ಆರಂಭಿಕ ಸಂದರ್ಭವನ್ನು ವಿವರಿಸಿದರು.
ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನೋಹರ ಮಲ್ಮನೆಯವರು ಸಮಯೋಚಿತ ಮಾತನಾಡಿದರು.
ಅಧ್ಯಕ್ಷೀಯ ನುಡಿಯನ್ನಾಡಿದ ಕಥೆಗಾರ ವಿಮರ್ಶಕ ಹಿರಿಯ ಸಾಹಿತಿ ಡಿ ಎಸ್ ನಾಯ್ಕ ಮಾತನಾಡಿ ಜೀವನದ ಸಂಧ್ಯಾ ಕಾಲ ನಿಜಕ್ಕೂ ಸಂತೋಷವಾಗಿ ಕಳೆಯಬೇಕು. ಬದುಕಿನ ಪಕ್ವತೆಯ ಅನುಭವಿಸಿ ಮಕ್ಕಳಿಗೆ ಉಣಬಡಿಸುವ ಸಮಯದಲ್ಲಿ ಅನಾಥರಾಗುವ ಹಿರಿಯ ಜೀವಿಗಳಿಗೆ ಸುಯೋಗ ಆಶ್ರಮ ಒಂದು ದೇವಾಲಯ ಇದ್ದಂತೆ ಲಾಥಿಕಾ ಭಟ್ಟ ತಾಯಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಂಶುಪಾಲರಾದ ಡಾ.ಜಿ ಎ ಹೆಗಡೆ ಸೋಂದಾ. ಕವಯತ್ರಿ ರೋಹಿಣಿ ಹೆಗಡೆ, ದಾಕ್ಷಾಯಿಣಿ ಪಿ.ಸಿ, ಶೋಭಾ ಭಟ್ಟ, ಹಿರಿಯ ಎಲ್ ಆರ್ ಭಟ್ ದಂಪತಿಗಳು, ಶ್ರೀಧರ ಹೆಗಡೆ ಚಪ್ಪರಮನೆ ದಂಪತಿಗಳು, ಶಾಂತಾರಾಮ ಹೆಗಡೆ,ಬಂಡಿಮನೆ, ಭಾಸ್ಕರ ಗೋ ಹೆಗಡೆ, ಗಣಪತಿ ನಾ ಭಟ್ಟ, ಲಲಿತಾ ನಾ ಭಟ್ಟ ಮುಂತಾದವರು ಉಪಸ್ಥಿತರಿದ್ದರು. ಆಶ್ರಮದ ಹಿರಿಯ ಜೀವಿಗಳೆಲ್ಲ ಉತ್ಸಾಹದಿಂದ ಹಾಜರಿದ್ದು ಧಾರ್ಮಿಕ ಉಪನ್ಯಾಸ ಕೇಳಿ ಪುಣ್ಯ ಪ್ರಾಪ್ತಿ ಮಾಡಿಕೊಂಡರು. ಕಥೆಗಾರ, ಸಮಾಜ ಸೇವಕ ರಾಜು ಉಗ್ರಾಣಕರ ಕಾರ್ಯಕ್ರಮ ನಿರೂಪಿಸಿದರು. ಕವಯತ್ರಿ ಸಾವಿತ್ರಿ ಶಾಸ್ತ್ರಿ ವಂದನಾರ್ಪಣೆ ನಡೆಸಿಕೊಟ್ಟರು.

error: