ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟಗಾರರ ವೇದಿಕೆಯ ಪರ ಮೂವತ್ತೇರಡನೇ ವರ್ಷವಾದ 2022 ರಲ್ಲಿ ಹೋರಾಟದ ಇತಿಹಾಸದಲ್ಲಿಯೇ ವಿಭಿನ್ನ ಹೋರಾಟದ ಮೂಲಕ “2022- ಹೋರಾಟದ ವರ್ಷ”ವನ್ನಾಗಿ ಹೋರಾಟಗಾರರ ವೇದಿಕೆಯಿಂದ ಉಲ್ಲೇಖಿಸಲ್ಪಟ್ಟಿದೆ ಎಂದು ವೇದಿಕೆಯ ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದ್ದಾರೆ.
2022ರಲ್ಲಿ ಹೋರಾಟಗಾರರ ವೇದಿಕೆಯಿಂದ ಸಾಂಘೀಕ ಮತ್ತು ಕಾನೂನಾತ್ಮಕ, ಕಾನೂನು ತಿಳುವಳಿಕೆ, ಉರುಳು ಸೇವೆ, ಅರಣ್ಯವಾಸಿಗಳನ್ನ ಉಳಿಸಿ, ಭೂಮಿ ಹಕ್ಕಿಗಾಗಿ ಹಳ್ಳಿ ಕಡೆ ನಡಿಗೆ,ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ತೀವ್ರ ಪ್ರತಿಭಟನೆ, ಪಾದಯಾತ್ರೆ, ಉಚಿತವಾಗಿ ಜಿಪಿಎಸ್ ಮೇಲ್ಮನವಿ ಅಭಿಯಾನ, ಸರಕಾರದೊಂದಿಗೆ ಸಮಾಲೋಚನೆ, ಕಾನೂನಾತ್ಮಕ ಅಂಶಗಳನ್ನ ಒಳಗೊಂಡಿರುವ ಮೂವತ್ತು ವರ್ಷ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ, ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಅರಣ್ಯವಾಸಿಗಳಿಗೆ ಜಾಗೃತೆ ಮೂಡಿಸುವ ಉದ್ದೇಶದಿಂದ ಹೋರಾಟದ ವಾಹಿನಿ ಮೂಲಕ ಜಾಗೃತ ಕಾರ್ಯಕ್ರಮ ಮುಂತಾದ ವಿಭಿನ್ನ ರೀತಿಯ ಹೋರಾಟಗಳು 2022 ನೇ ಇಸವಿಯ ಹೋರಾಟದ ಪುಟಗಳಿಗೆ ಇಂದು ಸೇರಲ್ಪಟ್ಟಿದೆ
ಎಂದು ಅವರು ಹೇಳಿದರು.
ಸರಕಾರದ ಮತ್ತುಜನಪ್ರತಿನಿಧಿಗಳ ಇಚ್ಛಾಶಕ್ತಿಕೋರತೆಯಿಂದ ಸಮಸ್ಯೆಗೆ ಪರಿಹಾರ ದೊರಕದೇ ಇರುವುದು ವಿಷಾದಕರ. ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿತೀರಸ್ಕಾರವಾಗಿರುವ ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸುವುದಾಗಿ ಸಲ್ಲಿಸಿದ ಪ್ರಮಾಣ ಪತ್ರ ಅರಣ್ಯ ಅತಿಕ್ರಮಣದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸುಫ್ರೀಂ ಕೋರ್ಟನಲ್ಲಿ ಸರಕಾರ ಅರಣ್ಯವಾಸಿಗಳ ಪರ ನಿಲುವನ್ನು ಪ್ರಕಟಿಸಬೇಕೆಂದು ರವೀಂದ್ರನಾಯ್ಕ ಅಗ್ರಹಿಸಿದರು.
163 ಗ್ರಾ.ಪಂ. ಯಲ್ಲಿ ಜಾಗೃತೆ:
ಅರಣ್ಯವಾಸಿಗಳ ವ್ಯಾಪಕ ಹೋರಾಟದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ 163 ಗ್ರಾಮ ಪಂಚಾಯತದಲ್ಲಿ ಹೋರಾಟಗಾರರ ವೇದಿಕೆಯ ನಿಯೋಗವು ಸಂಚರಿಸಿ ಅರಣ್ಯವಾಸಿಗಳಲ್ಲಿ ಅರಣ್ಯ ಭೂಮಿ ಹಕ್ಕಿಗೆ ಕುರಿತು ಜಾಗೃತೆ ಉಂಟುಮಾಡಿರುವುದು 2022 ರ ಹೋರಾಟದ ವಿಶೇಷತೆಯಲ್ಲಿಒಂದಾಗಿದೆ ಎಂದು ರವೀಂದ್ರನಾಯ್ಕ ಹೇಳಿದರು.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ