April 26, 2024

Bhavana Tv

Its Your Channel

ಸಚಿವರಾದ ಶಿವರಾಮ ಹೆಬ್ಬಾರ ಅವರ ಮುತುವರ್ಜಿಯಿಂದಾಗಿ ಹೆಗ್ಗಾರ ಮತ್ತು ಕಲ್ಲೇಶ್ವರ ಭಾಗದ ಸಾರ್ವಜನಿಕ ಸಂಪರ್ಕಕ್ಕೆ ವಿಶೇಷ ಯಾಂತ್ರೀಕೃತ ಬೋಟ್ ವ್ಯವಸ್ಥೆ

ಅಂಕೋಲಾ: ಹೆಗ್ಗಾರ ಮತ್ತು ಕಲ್ಲೇಶ್ವರಕ್ಕೆ ಸಂಪರ್ಕ ನೀಡುವ ಗುಳ್ಳಾಪುರ ಸೇತುವೆಯು ಭಾರಿ ಮಳೆಯಿಂದಾಗಿ ಕೊಚ್ಚಿಹೋಗಿದ್ದು, ಸಚಿವರಾದ ಶಿವರಾಮ ಹೆಬ್ಬಾರ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಪರಿಶೀಲನೆ ನಡೆಸಿದರು ಸ್ಥಳೀಯರು ಪರ್ಯಾಯ ವ್ಯವಸ್ಥೆ ಮಾಡುವಂತೆ ಸಂಪರ್ಕ ಸಾಧಿಸುವಂತೆ ಸಚಿವರ ಬಳಿ ಮನವಿ ಮಾಡಿದರು.ಸ್ಥಳೀಯರ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಳವಳ್ಳಿ, ಹೆಗ್ಗಾರ, ಕಲ್ಲೇಶ್ವರ, ಶೇವ್ಕಾರ ಭಾಗದ ಸಾರ್ವಜನಿಕರ ಅನೂಕುಲಕ್ಕಾಗಿ ಕೂಡಲೇ” ವಿಶೇಷ ಯಾಂತ್ರೀಕೃತ ಬೋಟ್ ” ನ ವ್ಯವಸ್ಥೆಯನ್ನು ಮಾಡಿದ್ದಾರೆ.
ಯಾಂತ್ರೀಕೃತ ಬೋಟ್ ಸುಮಾರು ೧೫ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹಾಗೂ ಎಲ್ಲಾ ರಕ್ಷಣಾ ಪರಿಕರಗಳನ್ನು ಈ ಬೋಟ ಹೊಂದಿದೆ, ಸಚಿವರ ಈ ಶೀಘ್ರ ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ.

error: