May 6, 2024

Bhavana Tv

Its Your Channel

ಯಲ್ಲಾಪುರ ತಾಲೂಕಿನ ಅತಿವೃಷ್ಟಿ ಪ್ರದೇಶಕ್ಕೆ ಮಾಜಿ ಸಚಿವ ಆರ್ ವಿ.ದೇಶಪಾಂಡೆ ಭೇಟಿ

ಯಲ್ಲಾಪುರ:- ಇತ್ತೀಚೆಗೆ ಬಾರಿ ಮಳೆಯಿಂದಾಗಿ ಯಲ್ಲಾಪುರದ ತಳಕೆಬೈಲ ಬಳಿ ಕುಸಿದ ಬಿದ್ದ ಪ್ರದೇಶಕ್ಕೆ ಹಾಗೂ ಅರಬೈಲ ಘಟ್ಟದ ಗುಡ್ಡ ಕುಸಿತ,ಗುಳ್ಳಾಪುರದಿಂದ ಹಳವಳ್ಳಿಗೆ ಸಂಪರ್ಕಿಸುವ ಸೇತುವೆ,ಗುಳ್ಳಾಪುರದ ಜನತಾ ಕಾಲನಿಗೆ ಮಾಜಿ ಸಚಿವ ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಕೂಡಲೇ ಎನ್ ಡಿ ಪಿ ರವರನ್ನು ಕರೆಸಿ ಯುದ್ದೋಪಾದಿಯಲ್ಲಿ ಸರ್ಕಾರ ಕೆಲಸ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಇಂತಹ ಸಮಯದಲ್ಲಿ ಜನ ಕೇಳುವುದಕ್ಕಿಂತ ಮೊದಲೇ ಸಹಾಯ ಮಾಡಬೇಕು,ಹೊಸ ಮನೆಯನ್ನು ಕಟ್ಟಿಕೊಡಬೇಕು, ಭೂಕುಸಿತ ಪ್ರದೇಶದ ಜನರನ್ನು ಶಾಶ್ವತ ಸ್ಥಳಾಂತರಿಸಿ ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸ ಬೇಕು. ಸರ್ಕಾರದಿಂದ ಈಗ ಕೊಡುವ ಪರಿಹಾರ ಅತೀ ಕಡಿಮೆ ಇದ್ದು ಅದನ್ನು ಹೆಚ್ಚಿಸಬೇಕು. ನೊಂದ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ, ತಾಲೂಕಿನ ಕಾಂಗ್ರೆಸ ಅಧ್ಯಕ್ಷರಾದ ಡಿ.ಎನ್. ಗಾಂವಕರ,ಜಿಲ್ಲಾ ಕಾಂಗ್ರೆಸ್ ವಕ್ತಾರಾದ ದೀಪಕ ದೊಡ್ಡುರ, ತಾಲೂಕಿನ ಕಾಂಗ್ರೆಸ ವಕ್ತಾರರಾದ ರವಿ ನಾಯ್ಕ,ಪೂಜಾ ನೇರ್ತೆಕರ, ಸರಸ್ವತಿ ಗುನಗ,ವಿಶ್ವನಾಥ ಘಟ್ಟಿ,ಎನ್.ಕೆ.ಮೆಣಸುಪಾಲ,ನಂದಿನ ಬಾಳಗಿ,ನರಸಿಂಹ ನಾಯ್ಕ,ಟಿ.ಸಿ.ಗಾಂವಕರ, ಪ್ರಶಾಂತ ಸಭಾಹಿತ,ಅನೀಲ ಮರಾಠೆ,ಪಿಜಿ.ಹೆಗಡೆ, ಜಿ.ಆರ್ ಹೆಗಡೆ,ಮಾಚಣ್ಣ ಮಲವಳ್ಳಿ ಗಣೇಶ ರೋಖಡೆ,ರಾಮ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ವೇಣುಗೋಪಾಲ ಮದ್ಗುಣಿ. ಯಲ್ಲಾಪುರ.

error: