April 27, 2024

Bhavana Tv

Its Your Channel

ಯಲ್ಲಾಪುರದಲ್ಲಿ ಕಾರ್ಗಿಲ್ ದಿನಾಚರಣೆ

ಯಲ್ಲಾಪುರ: ದೇಶದ ರಕ್ಷಣಾ ಸಾಮರ್ಥ್ಯವನ್ನು, ವಿಶ್ವಕ್ಕೆ ಪರಿಚಯಿಸಿದ “ಕಾರ್ಗಿಲ್ ವಿಜಯ” ದ ೨೨ ನೇ ವರ್ಷಾಚರಣೆಯ ಪ್ರಯುಕ್ತ ಇಲ್ಲಿನ ಅಂಬೇಡ್ಕರ ಸರ್ಕಲಿನಲ್ಲಿ ಭಾರತ ಮಾತಾ ಪೂಜನ ಹಾಗೂ ಹುತಾತ್ಮರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಿತು. ನಾಗರಿಕ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಉದ್ಘಾಟಿಸಿ, ಹುತಾತ್ಮರನ್ನು ಸ್ಮರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಭಾಜಪಾ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಬಾಬು ಬಾಂದೇಕರ, ಸೊಮೇಶ್ವರ ನಾಯ್ಕ, ವಿಶಾಲ ವಾಳಂಬಿ, ಯುವ ಮುಂದಾಳು ವಿವೇಕ ಹೆಬ್ಬಾರ, ಶ್ರೀಮತಿ ರಜನಿ ಚಂದ್ರಶೇಖರ ಮುಂತಾದವರು ಉಪಸ್ಥಿತರಿದ್ದರು. ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ರವಿ ಭಟ್ಟ ವಂದಿಸಿದರು.

ವರದಿ: ವೇಣುಗೋಪಾಲ ಮದ್ಗುಣಿ

error: