ನಂದೋಳ್ಳಿ:- ನಂದೋಳ್ಳಿ ಪಂಚಾಯತದ ಕುಳಿಮಾಗೋಡದ ರಾಮಕೃಷ್ಣ ಗೋಪಾಲ ಭಟ್ ಇವರ ಮನೆ ಹಾಗೂ ತೋಟದ ಪಕ್ಕದಲ್ಲಿರುವ ಗುಡ್ಡ ಕುಸಿದಿದ್ದು ಇದರಿಂದ ಅವರ ಭತ್ತದ ಗದ್ದೆಗೆ ಹಳ್ಳದ ನೀರು ಬಂದು ಜಲಾವೃತವಾಗಿ ಬಹಳಷ್ಟು ಹಾನಿ ಆಗಿದೆ, ಅದಲ್ಲದೆ ಕೃಷ್ಣ ವೆಂಕಟರಮಣ ಹೆಗಡೆ ಇವರ ಮನೆಯ ಪಕ್ಕ ಗುಡ್ದವೂ ಕುಸಿದಿದೆ. ಇದರಿಂದ ಮನೆಗೆ ಹಾನಿ ಆಗಿದೆ. ಗಣಪತಿ ಗೋಪಾಲ ಭಟ್ಟ ,ನಾರಾಯಣ ಗೋಪಾಲ ಭಟ್ಟ ಅವರ ಗದ್ದೆಯು ಜಲಾವೃತವಾಗಿದೆ. ಜುಲೈ ೨೨ ರಂದು ಬಿದ್ದ ಮಳೆಯಿಂದ ಅತೀವೃಷ್ಟಿಯಾಗಿ ಆದ ಹಾನಿಯನ್ನು ನಂದೋಳ್ಳಿ ಪಂಚಾಯತದ ಅಧ್ಯಕ್ಷರು, ಪಂಚಾಯತ ಅಧಿಕಾರಿಗಳು ಕಂದಾಯ ಇಲಾಖೆಯ ಲೆಕ್ಕಾಧಿಕಾರಿಗಳು ಬಂದು ನೋಡಿಕೊಂಡು ಹೊಗಿದ್ದಾರೆ. ಈ ಬಗ್ಗೆ ಈಗಾಗಲೇ ಸಚಿವರಾದ ಶಿವರಾಮ ಹೆಬ್ಬಾರ, ತಹಸೀಲ್ದಾರ ಬಳಿ ವಿನಂತಿಸಿದ್ದಾರೆ ಹಾಗು ಶೀಘ್ರ ವಾಗಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಸರಕಾರದಿಂದ ಸಹಾಯ ಮಾಡಿಕೊಡಲು ಸ್ಥಳಿಯರಾದ ರಾಮಚಂದ್ರ ಭಟ್ ಕಿರಕುಂಬತ್ತಿಯವರು ಆಗ್ರಹಿಸಿದ್ದಾರೆ.
ವರದಿ: ವೇಣುಗೋಪಾಲ ಮದ್ಗುಣಿ
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ