ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ತಾಲೂಕಿನ ತುಡಗುಣಿಯ ವಿಶಾಲನಗರದ ನಿವಾಸಿ ಅಂಗನವಾಡಿ ಸಹಾಯಕಿ ಸರೋಜಾ ಅಶೋಕ ನಾಯರ(೪೫) ಎಂಬುವವರನ್ನು ಚೂರಿಯಿಂದ ಇರಿದು ಕೊಂದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿ ತಾಲೂಕು ಕೆರೆಕೊಪ್ಪ ಹಾಲಿ ಗೋವಾ ರಾಜ್ಯದ ಮಾಪ್ಸಾ ನಿವಾಸಿ ಕೃಷ್ಣ ಸುಬ್ಬಾ ನಾಯ್ಕ(೪೬) ಬಂಧಿತ ಆರೋಪಿಯಾಗಿದ್ದಾನೆ. ಕೊಲೆಯಾದ ಸರೋಜ ನಾಯರನ ತಂಗಿ ಮಂಗಳಾ ಜೊತೆ ಸ್ನೇಹ ಮಾಡಿ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಆರೋಪಿ ಕೃಷ್ಣಾ ನಾಯ್ಕ ಆಕೆಯೊಂದಿಗೆ ಗೋವಾದಲ್ಲಿ ನೆಲೆಸಿದ್ದ, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳದೇ ಆಕೆಯನ್ನು ಹೊಡೆದು-ಬಡಿದು ಜಗಳಮಾಡಿಕೊಂಡಿದ್ದಾನೆ. ಕೊಲ್ಲುವ ಬೆದರಿಕೆ ಹಾಕಿರುವನ ಕಾರಣಕ್ಕೆ ಇತ್ತೀಚೆಗೆ ಆರೋಪಿಯ ಜೊತೆ ಜಗಳ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದಳು. ಈ ಸಂಬAಧ ಆರೋಪಿ ಕೃಷ್ಣಾ ನಾಯ್ಕ ಸೆ.೧೬ ರಂದು ಸರೋಜಾಳ ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ, ಸರೋಜಾಳನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಅಲ್ಲದೇ ಅಕ್ಷಯ ಎನ್ನುವ ಯುವಕನನ್ನು ಬಲವಂತವಾಗಿ ಎಳೆದುಕೊಂಡು ಕಾಡಿನೊಳಗೆ ಓಡಿ ಹೋಗಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಪೊಲೀಸ ನಿರೀಕ್ಷಕ ಸುರೇಶ ಯೆಳ್ಳೂರು, ಪಿಎಸ್ ಐ ಮಂಜುನಾಥ ಗೌಡರ ನೇತೃತ್ವದಲ್ಲಿ ಪಿಎಸ್ಐ ಪ್ರಿಯಾಂಕಾ ನ್ಯಾಮೇಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಾಯಕ್ಕೆ ಹಾಜರಪಡಿಸಿದ್ದಾರೆ
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ