May 19, 2024

Bhavana Tv

Its Your Channel

ಪಂಚಮುಖಿ ವೀರಾಆಂಜನೇಯ ಮತ್ತು ನಾಗದೇವರ ವರ್ಧಂತಿ ಉತ್ಸವ ಹಾಗೂ ದೀಪೋತ್ಸವ

ವರದಿ:- ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ದೇವಿ ಮೈದಾನದ ಪಂಚಮುಖಿ ವೀರಾಆಂಜನೇಯ ಮತ್ತು ನಾಗದೇವರ ವರ್ಧಂತಿ ಉತ್ಸವ ಹಾಗೂ ದೀಪೋತ್ಸವವು ಅತ್ಯಂತ ವೈಭವದಿಂದ ನಡೆಯಿತು.

ಸಾವಿರಾರು ಭಕ್ತರು ಆಗಮಿಸಿ ಪೂಜೆಯನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಭಟ್ಟರವರು ನೇತೃತ್ವದಲ್ಲಿ ವಿಜಯಶಂಕರ ನಾಯಕ(ಉದಯ),ಅಮೃತ ಬದ್ದಿ,ಮಾರುತಿ ನಾಯ್ಕ,ಮಹೇಶ ನಾಯ್ಕ, ನಯನ ಇಂಗಳೆ, ಕೇಶವ ನಾಯಕ,ಶಂಕರ ಪಟಗಾರ,ಹರಿ ಭಜಂತ್ರಿಯವರು ದೇವರ ಕಾರ್ಯ ನೇರವೇರಿಸಿದರು. ನಾರಾಯಣ ಪುರಾಣಿಕರವರು ಅರ್ಚಕರಾಗಿ ದೇವರ ಸೇವೆಯನ್ನು ನೇರವೇರಿಸಿದರು.

error: