May 18, 2024

Bhavana Tv

Its Your Channel

ತಹಶೀಲ್ದಾರ ಶ್ರೀಕೃಷ್ಣ ಕಾಮಕರವರಿಗೆ “ಉತ್ತಮ ಚುನಾವಣಾಧಿಕಾರಿ” ಪ್ರಶಸ್ತಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಯಲ್ಲಾಪುರ ತಾಲೂಕಿನ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಕೃಷ್ಣ ಕಾಮಕರವರಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದ ನೀಡುತ್ತಿರುವ “ಉತ್ತಮ ಚುನಾವಣಾಧಿಕಾರಿ” ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕಳೆದ ಕೆಲ ವರ್ಷಗಳಿಂದ ಯಲ್ಲಾಪುರ ತಾಲೂಕಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕಾರ್ಯ ವೈಖರಿಯನ್ನು ಜನ ಶ್ಲಾಘಿಸುತ್ತಿದ್ದಾರೆ. ತಮ್ಮ ಸರಳ,ನೇರ ನುಡಿ ವ್ಯಕ್ತಿತ್ವದಿಂದಾಗಿ ಸಾರ್ವಜನಿಕರೊಂದಿಗೆ ಸದಾ ನಗು ಮುಖದಿಂದ ಬೆರೆಯುವ ಸ್ವಭಾವ ಎಲ್ಲರ ವರ್ಗದ ಮೆಚ್ಚುಗೆಯ ಪಾತ್ರವಾಗಿದೆ.
ತಾಲೂಕ ಕಛೇರಿಯಲ್ಲಿ ಚುನಾವಣಾ ವಿಭಾಗದ ಶಿರಸ್ತೇದಾರರಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾ ಜಾದವರವರಿಗೆ ಉತ್ತಮ ಚುನಾವಣಾಧಿಕಾರಿ ಎಂದು ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕಾರ ಮಾಡಲಾಗಿದೆ.

error: