May 2, 2024

Bhavana Tv

Its Your Channel

ರೈತರ ಮನೆ ಬಾಗಿಲಿಗೆ ಪಹಣಿ ಹಾಗೂ ಇತರ ಸೌಲಭ್ಯಗಳು. ಸಚಿವರಾದ ಶಿವರಾಮ ಹೆಬ್ಬಾರಿಂದ ಚಾಲನೆ.

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಕಂಪ್ಲಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಕಂದಾಯ ಇಲಾಖೆ ಮೂಲಕ ನೀಡಲಾಗುವ ಪಹಣಿ, ಸರ್ವೇ ನಕ್ಷೆ , ಆದಾಯ ಮತ್ತು ಜಾತಿ ಪ್ರಮಾಣಪತ್ರ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆ ” ಕಂದಾಯ ಇಲಾಖೆ ಮನೆ ಬಾಗಿಲಿಗೆ ” ಕಾರ್ಯಕ್ರಮಕ್ಕೆ ಸ್ಥಳೀಯ ರೈತನ ಕೈಯಲ್ಲಿ ದೀಪ ಬೆಳಗಿಸುವುದರ ಮೂಲಕವಾಗಿ ಚಾಲನೆ ನೀಡಿದರು.
ಸಚಿವರಾದ ಶಿವರಾಮ ಹೆಬ್ಬಾರವರು ಸ್ಥಳೀಯ ರೈತರಿಗೆ ಕಂದಾಯ ಇಲಾಖೆ ಮೂಲಕ ನೀಡಲಾಗುವ ವಿವಿಧ ದಾಖಲೆಗಳನ್ನು ವಿತರಿಸಿ, ಈ ಯೋಜನೆ ಕುರಿತಂತೆ ಮಾತನಾಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಕಂಪ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ವಿನಾಯಕ ನಾಯ್ಕ, ಉಪಾಧ್ಯಕ್ಷರಾದ ರಂಚನಾ ಆಚಾರಿ ಹಾಸಣಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪುರಂದರ ನಾಯ್ಕ, ಹಾಗೂ ಕಂಪ್ಲಿ ಮತ್ತು ಹಾಸಣಗಿ ಗ್ರಾಮ ಪಂಚಾಯತ ಸದಸ್ಯರು, ಸಾರ್ವಜನಿಕರು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

error: