May 19, 2024

Bhavana Tv

Its Your Channel

ಏ.29ರಂದು ಯಲ್ಲಾಪುರದಲ್ಲಿ “ವಿಶ್ವದರ್ಶನ ಸಂಭ್ರಮ” ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ವಿಶ್ವದರ್ಶನ ಸಂಭ್ರಮ ಏ.29 ರಂದು ಮಧ್ಯಾಹ್ನ2.30 ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಹರಿಪ್ರಕಾಶ ಕೋಣೆಮನೆ ಹೇಳಿದರು.
ಈ ಕುರಿತು ಕಾರ್ಯಕ್ರಮದ ಆಮಂತ್ರಣ ಬಿಡುಗಡೆಗೊಳಿಸಿ,ಮಾಹಿತಿ ನೀಡುತ್ತಿದ್ದರು.
ವಿಶ್ವದರ್ಶನ ಪಿ.ಯು.ಕಾಲೇಜು, ಶ್ರೀಗಂಗಾಧರೇAದ್ರ ಸರಸ್ವತಿ ಸಭಾಭವನ, ಹಾಗೂ ಸಿ.ಬಿ.ಎಸ್.ಇ ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಚಾಲನೆ ನೀಡಲಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೊಣೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ,ವಾ.ಕ.ರಾ.ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್,ಎಂಎಲ್ಸಿಸಿ ಶಾಂತಾರಾಮ ಸಿದ್ದಿ,ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮೈಸೂರು ಮರ್ಕಂಟೈಲ್ ಕಂಪನಿಯ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡಲಾಗುವುದು.ನಂತರ ಪ್ರಶಸ್ತಿ ಪ್ರಧಾನ,ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಪ್ರಸಿದ್ದ ಕಲಾವಿದರಿಂದ ಯಕ್ಷ ಗಾಯನ,ನೃತ್ಯ ಕಾರ್ಯಕ್ರಮ ನಡೆಯಲಿದೆ.ಶಿಕ್ಷಣ ಸಚಿವರು ಶಿಕ್ಷಣ,ಸಂಸ್ಕಾರ,ರಾಷ್ಟ್ರನಿರ್ಮಾಣ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ.ಮೆ.4 ರಂದು ಸ್ವರ್ಣವಲ್ಲಿ ಶ್ರೀಗಳ ಪಾದಪೂಜೆ,ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಸಕ್ತ ಸಾಲಿನಿಂದ ಪಿಯು ವಾಣಿಜ್ಯ ಮತ್ತು ವಿಜ್ಞಾನ ಸಂಯೋಜನೆಗಳು ಕಾರ್ಯಾರಂಭ ಮಾಡಲಿವೆ.ಆಧುನಿಕ ಪ್ರಯೋಗಾಲಯ,ವ್ಯವಸ್ಥಿತ ಪಾಠ,ಪೀಠೋಪಕರಣ ಹೊಂದಿದ್ದು,ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ ಸೌಲಭ್ಯ ಮುಂದಿನ ವರ್ಷದಿಂದ 300 ವಿದ್ಯಾರ್ಥಿಗಳಿಗೆ ಪರಿಪೂರ್ಣ ವಸತಿ ಕಲ್ಪಿಸಲಾಗುತ್ತದೆ.ವಾಣಿಜ್ಯ ವಿದ್ಯಾರ್ಥಿ ಗಳಿಗೆ ಸಿ.ಎ.ಪೌಂಡೇಶನ್ ಐಬಿಪಿಎಸ್ ತರಬೇತಿ,ವಿಜ್ಞಾನ ವಿದ್ಯಾರ್ಥಿಗಳಿಗೆ ಜೆಇಇ,ನೀಟ್,ಸಿಇಟಿ ಪರೀಕ್ಷೆ ತರಬೇತಿ ನೀಡಲಾಗುವುದು.
ಪ್ರಸಕ್ತ ಸಾಲಿನಿಂದ ಸಿಬಿಎಸ್ ಇ ಪಠ್ಯಕ್ರಮ ಆರಂಭ,ಬಡ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಹಂಟ್ ಮೂಲಕ ಮಿತವಾದ ಶುಲ್ಕ ಮಾಡಕೊಡಲಾಗುತ್ತದೆ.ಇಡಗುಂದಿ ಶಾಲೆಯ ನವೀಕೃತ ಕಟ್ಟಡ ಉದ್ಘಾಟನೆ ಸಹ ನೆರವೇರಲಿದೆ ಎಂದರು.

ಉಪಾಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ, ಪ್ರಮುಖರಾದ ಡಾ.ಧನಂಜಯ,ದೀಪಾ,ಡಾ.ಕೋಡಿ ರಂಗಪ್ಪ,ಧರ್ಮೆಂದ್ರ,ಕೆ.ಬಿ.ವೇದಮೂರ್ತಿ,ನರಸಿAಹ ಕೋಣೆಮನೆ,ಗುರುರಾಜ ಕುಂದಾಪುರ ಉಪಸ್ಥಿತರಿದ್ದರು.

error: