May 19, 2024

Bhavana Tv

Its Your Channel

ಡಿ.25 ರಂದು ಯಲ್ಲಾಪುರದ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ರವರಿಗೆ ಅಭಿನಂಧನಾ ಸಮಾರಂಭ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಯಲ್ಲಾಪುರದ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಅವರಿಗೆ 70 ಸಂವತ್ಸರ ತುಂಬಿದ ಹಿನ್ನೆಲೆಯಲ್ಲಿ ಡಿ.25 ರಂದು ಪಟ್ಟಣದ ರೈತ ಸಭಾಭವನದಲ್ಲಿ ಅಭಿನಂಧನಾ ಸಮಾರಂಭ ನಡೆಯಲಿದೆ ಎಂದು ಅಭಿನಂದನಾ ಗ್ರಂಥದ ಸಂಪಾದಕ ಕಶ್ಯಪ್ ಪರ್ಣಕುಟಿಯವರು ಹೇಳಿದರು.
ಅವರು ಮಂಗಳವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಡಿ.25 ರಂದು ಬೆಳಗ್ಗೆ 6 ಕ್ಕೆ ಶಕ್ತಿ ಗಣಪತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಚಂಡೆವಾದನ, ಪೂರ್ಣಕುಂಭದೊAದಿಗೆ ಮೆರವಣಿಗೆ ಸಾಗಲಿದೆ. 10 ಘಂಟೆಗೆ ಅಭಿನಂಧನಾ ಸಮಾರಂಭ ನಡೆಯಲಿದೆ.
ಶಾಸಕ ಆರ್.ವಿ.ದೇಶಪಾಂಡೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಬಸವರಾಜ ಹೊರಟ್ಟಿ, ಎಚ್.ಕೆ.ಪಾಟೀಲ್, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ, ಅರ್ಥದಾರಿ ಉಮಾಕಾಂತ ಭಟ್ಟ ಕೆರೆಕೈ, ಕವಿ ಜಯಂತ ಕಾಯ್ಕಿಣಿ, ಪತ್ರಕರ್ತ ವಿಶ್ವೇಶ್ವರ ಮುಂತಾದವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ “ಸಾರ್ಥಕ ಸಂಕಲ್ಪ ” ಅಭಿನಂದನಾ ಕೃತಿ ಬಿಡುಗಡೆ ಮಾಡಲಿದ್ದಾರೆ. ನಂತರ ಪ್ರಸಿದ್ಧ ಕಲಾವಿದರಿಂದ ಯಕ್ಷಗಾಯನ, ರಾತ್ರಿ ಬ್ರಹ್ಮಕಪಾಲ ಯಕ್ಷಗಾನ ನಡೆಯಲಿದೆ ಎಂದರು.
ಸಮಿತಿಯ ಪ್ರಮುಖರಾದ ಡಿ.ಶಂಕರ ಭಟ್ಟ, ಟಿ.ಶಂಕರ ಭಟ್ಟ , ಸಿ.ಜಿ.ಹೆಗಡೆ, ಪಿ.ಜಿ.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

error: