May 19, 2024

Bhavana Tv

Its Your Channel

ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕ ಪ್ರಶಸ್ತಿ ವಿತರಣೆ

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದಲ್ಲಿ 2021-22 ನೇ ಸಾಲಿನಲ್ಲಿ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಯವರು ವಹಿಸಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಅವರಿಗೆ ಶುಭಹಾರೈಸಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಎನ್. ಎಸ್. ಭಟ್ ಮುಖ್ಯೋಪಾಧ್ಯಾಯರು ವಾಯ್. ಟಿ ಎಸ್ ಎಸ್. ಪ್ರೌಢಶಾಲೆ ಇವರು ಆಗಮಿಸಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಅವರನ್ನು ಉದ್ದೇಶಿಸಿ ಮಾತನಾಡಿದರು. ಅವರು ಮುಂದಿನ ಶಿಕ್ಷಕರಾಗುವ ನಿಮಗೆ ಮಕ್ಕಳ ಮನಸ್ಸನ್ನು ಅರಿತು ಮೌಲ್ಯಯುತ ಶಿಕ್ಷಣವನ್ನು ನೀಡುವ ಜವಾಬ್ದಾರಿ ನಿಮ್ಮಮೇಲಿದೆ ಎಂದರು.ಈ ಕಾರ್ಯಕ್ರಮಕ್ಕೆ ಮತ್ತೊರ್ವ ಅಥಿತಿಗಳಾಗಿ ಆಗಮಿಸಿದ ಹಿತ್ಲಳ್ಳಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ವಿವೇಕ ಹೆಗಡೆ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಮಾತನಾಡಿದರು.. ಅವರು ನೀವು ಯಾವುದೇ ಕಾರ್ಯವನ್ನು ಮಾಡಬೇಕಾದರೂ ನಿಮ್ಮ ಬುದ್ಧಿಶಕ್ತಿ ಅಂದರೆ ನಿಮ್ಮ ಕೀಲಿ ಕೈ ಇದ್ದಂತೆ ಅದು ಸದಾ ನಿಮ್ಮಲ್ಲಿಯೇ ಇರಬೇಕು ಎಂದರು. ಬಿ.ಇಡಿ ಪ್ರಾಂಶುಪಾಲ ಡಾ. ಎಸ್. ಎಲ್. ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಜವಾಬ್ದಾರಿಯನ್ನು ಹಾಗೂ ಪ್ರಶಸ್ತಿ ವಾಚನವನ್ನು ಉಪನ್ಯಾಸಕರಾದ ಪೂರ್ಣಿಮಾ ಉಪಾಧ್ಯಾಯ ಹಾಗೂ ಗೀತಾ ನಾಯಕ ನಿರ್ವಹಿಸಿದರು.ಉಪನ್ಯಾಸಕರಾದ ಬಿ. ಎನ್. ಭಟ್ ಸ್ವಾಗತಿಸಿದರು.ಸೀತಾರಾಮ್ ಗೌಡ ವಂದಿಸಿದರು.ವೀಣಾ ಭಾಗ್ವತ ನಿರೂಪಿಸಿದರು.

error: