May 3, 2024

Bhavana Tv

Its Your Channel

ಧಾರಾಕಾರ ಮಳೆಗೆ ಕೊಚ್ಚಿ ಹೋದ ರಸ್ತೆ,

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ರಸ್ತೆ .ಕೊಚ್ಚಿ ಹೋಗಿದೆ,

ಇಳಕಲ್ ; ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಇಲಕಲ್ ಕಂದಗಲ್ ಮುಖ್ಯ ರಸ್ತೆ ಕೊಚ್ಚಿ ಹೋಗಿದೆ. ಸೇತುವೆಯು ಸಂಪೂರ್ಣ ಮುಳ್ಳುಕಂಟಿಗಳಿ0ದ ಬಂದಾಗಿದ್ದರಿAದ ನೀರು ಹೋಗಲು ಆಸ್ಪದ ಇರದ ಕಾರಣ ರಸ್ತೆಯ ಮೇಲೆ ಬಂದು ರಸ್ತೆ ಕುಸಿತವಾಗಿದೆ. ಇದರಿಂದ ಇಳಕಲ್ ಕಂದಗಲ್ ಮುಖ್ಯ ರಸ್ತೆ ಬಂದ್ ಆಗಿದೆ.
ಅದೇ ರೀತಿ ದಾರಾಕಾರ ಮಳೆಗೆ ಪೇರಲ ಗಿಡ ಸಂಪೂರ್ಣ ನಾಶವಾದ ಘಟಣೆ ಸಂಬವಿಸಿದೆ, ಹಿರೇ ಓತಗೇರಿ ಗ್ರಾಮದ ಮಲ್ಲನಗೌಡ ರಾಮನಗೌಡ ಗೌಡರ ಎಂಬ ರೈತನ ತೋಟದಲ್ಲಿ ಬೆಳೆದ ಲಕ್ಷಾಂತರ ರೂಪಾಯಿ ಪೇರಲ ಗಿಡ ದಾರಾಕಾರ ಮಳೆಗೆ ಸಂಪೂರ್ಣ ನಾಶವಾಗಿದೆ. ಲಕ್ಷಾಂತರ ರೂ ಖರ್ಚು ಮಾಡಿ ಡ್ರಿಪ್ ಮೂಲಕ ಬೆಳೆದ ಪೇರಲ ಗಿಡಗಳು. ತೆಂಗಿನ ಗಿಡಗಳು ಮಳೆಯ ರಭಸಕ್ಕೆ ಸಂಪೂರ್ಣ ನಾಶವಾಗಿವೆ. ಗಿಡಗಳ ರಕ್ಷಣೆಗಾಗಿ ತೋಟದ ಸುತ್ತಲೂ ಸಿಮೆಂಟಿನ ಕಂಬಗಳನ್ನು ನೆಟ್ಟಿದ್ದರು. ಅವುಗಳು ಕೂಡ ನೀರಿನ ರಭಸಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗಿವೆ.
ಸಾಲ ಮಾಡಿ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಗಿಡಗಳು ಮಳೆಯ ರಭಸಕ್ಕೆ ಸಂಪೂರ್ಣ ನಾಶವಾಗಿ ರೈತನ ಬದುಕು ಕಷ್ಟಕರವಾಗಿದೆ. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರೈತನ ಬೆಳೆ ಸಂಪೂರ್ಣ ನಾಶವಾಗಿದ್ದು ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಹಾಗೂ ತಾಲ್ಲೂಕು ಅಧಿಕಾರಿ ಭೇಟಿ ನೀಡದಿರುವುದು. ರೈತನ ದೌರ್ಬಾಭಾಗ್ಯವೇನೊ ಎನ್ನುಬಹುದು.

ಲಕ್ಷಾಂತರ ರೂ ಹಾನಿಯಾದ ರೈತನಿಗೆ ಸರ್ಕಾರದಿಂದ ಪರಿಹಾರ ಸಿಗಬಹುದೇ ಕಾದು ನೋಡಬೇಕಾಗಿದೆ.

ವರದಿ : ವಿನೋದ ಬಾರಿಗಿಡದ

error: